‘ಕಟ್ಟಡ ಕಾರ್ಮಿಕರಾಗಿದ್ದ ಡೇವಿಡ್ ಜಾನ್ ಎಂಬುವರು ಪತ್ನಿ ನೇತ್ರಾವತಿ ಹಾಗೂ ಮಗನೊಂದಿಗೆ ಶ್ರೀರಾಮಪುರದಲ್ಲಿ ನೆಲೆಸಿದ್ದರು. ಡೇವಿಡ್ ಅವರು ಮುಂಜಾನೆ 5.30ರ ಸುಮಾರಿಗೆ ಧನ್ವಂತರಿ ರಸ್ತೆಯ ಸಂಗಮ್ ಎಂಟರ್ಪ್ರೈಸಸ್ ಬಳಿಯ ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗಿದ್ದರು. ಉತ್ತರಾಖಂಡದ ಶಂಕರ್, ಹಿಟಾಚಿಯನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಜಲ್ಲಿ ಕಲ್ಲಿನ ರಾಶಿ ಬಳಿ ಮಗು ಇರುವುದನ್ನು ಗಮನಿಸಿರಲಿಲ್ಲ’ ಎಂದು ಪೊಲೀಸರು ಹೇಳಿದರು.