ಅನುಮತಿ ಕೋರಿದ್ದ ಕಾರ್ತಿಕ್: ‘ಇದೇ 20ರಂದು ಶಿಲ್ಪಾ ಅವರಿಗೆ ಕರೆ ಮಾಡಿದ್ದ ಕಾರ್ತಿಕ್, ‘ಜಲಮಂಡಳಿಯಿಂದ ಹುಳಿಮಾವು ಕೆರೆಯ ದಕ್ಷಿಣ ಭಾಗದಲ್ಲಿ ಎಸ್ಟಿಪಿ ಕಾಮಗಾರಿ ಮಾಡಿಸಲಾಗುತ್ತಿದೆ. ಕೆರೆಯಲ್ಲಿ ನೀರು ಹೆಚ್ಚಿರುವುದರಿಂದ ಕಾಮಗಾರಿ ಜಾಗದಲ್ಲಿರುವ ದೇವಸ್ಥಾನಕ್ಕೆ ನೀರು ಹರಿಯುತ್ತಿದೆ. ಕೋಡಿ ಮಟ್ಟವನ್ನು ತಗ್ಗಿಸಿ ನೀರನ್ನು ಹೊರಗೆ ಹರಿಸುವಂತೆ ಸಾರ್ವಜನಿಕರು ಕೋರುತ್ತಿದ್ದಾರೆ. ಕೋಡಿ ಮಟ್ಟ ತಗ್ಗಿಸಲು ಅನುಮತಿ ಕೊಡಿ’ ಎಂಬುದಾಗಿ ಕೋರಿದ್ದರು. ಈ ಬಗ್ಗೆ ಶಿಲ್ಪಾ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.