ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣ ಪ್ರಯಾಸ: ಭಾರಿ ವಾಹನಗಳಿಂದ ಬೆಂಗಳೂರಲ್ಲಿ ಸಂಭವಿಸಿದ ಪ್ರಮುಖ ಅಪಘಾತಗಳಿವು

Last Updated 19 ಮಾರ್ಚ್ 2022, 4:28 IST
ಅಕ್ಷರ ಗಾತ್ರ

l2021ರ ಅಕ್ಟೋಬರ್ 26: ಎಚ್‌ಎಎಲ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಟಿಪ್ಪರ್ ಲಾರಿಯೊಂದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬೈಕ್‌ನಿಂದ ಬಿದ್ದಿದ್ದ ಶ್ರೀದೇವಿ ಹಾಗೂ ಅವರ ಒಂದು ವರ್ಷದ ಮಗು ದಕ್ಷಿತ್ ಮೇಲೆಯೇ ಲಾರಿಯ ಚಕ್ರ ಹರಿದಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.

l2022ರ ಜನವರಿ 4: ಅಶೋಕನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ಆರ್.ಎಸ್.ಪಾಳ್ಯ ನಿವಾಸಿಯೂ ಆಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಂಜನಾ ಪ್ರಿಯಾ (21) ಮೃತಪಟ್ಟಿದ್ದರು.

lಜ. 8: ಬನ್ನೇರುಘಟ್ಟ- ತುಮಕೂರು ನೈಸ್ ರಸ್ತೆಯಲ್ಲಿ ಲಾರಿಯೊಂದು ಕಾರು ಹಾಗೂ ಬೈಕ್‌ಗಳಿಗೆ ಡಿಕ್ಕಿ ಹೊಡೆದಿತ್ತು. ಸರಣಿ ಅಪಘಾತದಲ್ಲಿ ಕೇರಳದ ಫಾದಿಲ್, ಅಭಿಲಾಶ್, ಶಿಲ್ಪಾ ಹಾಗೂ ಜೀನಾ ಎಂಬುವರು ಮೃತಪಟ್ಟಿದ್ದರು.

lಜ. 11: ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯ ದೊಡ್ಡಬೆಲೆ ವೃತ್ತದ ಬಳಿ ಕ್ಯಾಂಟರ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಅಲ್ವಿನ್ (23) ಮೃತಪಟ್ಟಿದ್ದರು.

lಜ. 13: ಕೋಣನಕುಂಟೆ ಬಳಿಯ ವಾಜರಹಳ್ಳಿ ಮುಖ್ಯರಸ್ತೆಯಲ್ಲಿ ಟಿವಿಎಸ್‌ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದಿತ್ತು. ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್‌ ಸ್ಟಾರ್’ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ (6) ಮೃತಪಟ್ಟಿದ್ದರು.

lಜ. 21: ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೈಕ್‌ನಿಂದ ಆಯತಪ್ಪಿ ಬಿದಿದ್ದ ಬಿಬಿಎ ವಿದ್ಯಾರ್ಥಿನಿ ಮಹಶ್ರೀ (20) ಅವರ ಮೈ ಮೇಲೆ ಲಾರಿ ಚಕ್ರ ಹರಿದಿತ್ತು. ಹುಟ್ಟುಹಬ್ಬದ ದಿನವೇ ಸಂಭವಿಸಿದ್ದ ಅಪಘಾತದಲ್ಲಿ ವಿದ್ಯಾರಣ್ಯಪುರದ ಮಹಶ್ರೀ ಮೃತಪಟ್ಟಿದ್ದರು.

lಜ. 23: ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಪುರಭವನ ಬಳಿ ಲಾರಿಯೊಂದು ರಸ್ತೆ ವಿಭಜಕಕ್ಕೆ ಗುದ್ದಿ, ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದಿತ್ತು. ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಪತ್ರಕರ್ತ ಎಸ್.ಎಸ್. ಗಂಗಾಧರಮೂರ್ತಿ (49) ಮೃತಪಟ್ಟಿದ್ದರು.

lಜ. 23: ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ಗೆ ಕ್ಯಾಂಟರ್‌ ವಾಹನವೊಂದು ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ಅಸ್ಸಾಂನ ಕುಮಾರ್ ಲಂಬಾ (25) ಮತ್ತು ಸುನೀಲ್ ಚೆಟ್ರಿ (24) ಮೃತಪಟ್ಟಿದ್ದರು.

lಜ. 30: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್‌ ಉರುಳಿಬಿದ್ದಿದ್ದರಿಂದ ಶಿಕ್ಷಕಿ ಶರ್ಮಿಳಾ ರಸ್ತೆಗೆ ಬಿದ್ದಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಗೂಡ್ಸ್‌ ವಾಹನ, ಶರ್ಮಿಳಾ ಅವರ ಮೈಮೇಲೆ ಹರಿದು ಹೋಗಿತ್ತು. ತೀವ್ರ ಗಾಯಗೊಂಡು ಶರ್ಮಿಳಾ ಮೃತಪಟ್ಟಿದ್ದರು.

lಫೆ. 8: ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ‘ಶುಭೋದಯ’ ಪ್ರಿಂಟಿಂಗ್ ಪ್ರೆಸ್‌ ಮಾಲೀಕ ಗಿರೀಶ್ (50) ಮೃತಪಟ್ಟಿದ್ದರು.

lಮಾ. 14: ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯ ಕನಕಪುರ ಟೋಲ್‌ ಗೇಟ್ ಬಳಿ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ಸಂಧ್ಯಾ (21) ಎಂಬುವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT