ಬೆಂಗಳೂರು: ಅಕ್ರಮವಾಗಿ ಶ್ರೀಗಂಧ ಮಾರಾಟ ಮಾಡಲು ಮುಂದಾಗಿದ್ದ ಆಂಧ್ರಪ್ರದೇಶದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕಾಗಿನಾಡ ರೌತಲಪುಡಿಹಳ್ಳಿಯ ಸಿ.ಎಸ್.ಶ್ರೀನಿವಾಸ್ ಹಾಗೂ ಸೂರ್ಯಚಂದ್ರ ಸಿದ್ದಿರೆಡ್ಡಿ ಬಂಧಿತ ಆರೋಪಿಗಳು.
‘ಇಂದಿರಾನಗರದ 80 ಅಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಶ್ರೀಗಂಧ ತುಂಡುಗಳನ್ನು ಮಾರಾಟಕ್ಕೆ ತಂದಿದ್ದರು. ಬಂಧಿತರಿಂದ 4 ಕೆ.ಜಿ 810 ಗ್ರಾಂ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.