<p><strong>ಬೆಂಗಳೂರು:</strong> ಬೇರೆ ಬೇರೆ ವಲಯ, ವರ್ಗ, ಸಮುದಾಯದವರು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಶಕ್ತಿ ಹೆಚ್ಚಿಸಿದ್ದಾರೆ. ಸಾಹಿತ್ಯಕ್ಕೆ ಮಹತ್ವ ತಂದುಕೊಟ್ಟಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಬುಧವಾರ ಹೂವಿನಹಡಗಲಿಯ ಏಳುಕೋಟಿ ಪ್ರಕಾಶನವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌಡ್ರ ಶಿವಕುಮಾರಗೌಡ ಅವರ ‘ನಾ ಕಂಡ ಸಮಾಜ ಮತ್ತು ಸಮಸ್ಯೆಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಬೇರೆ ಬೇರೆ ಸಮುದಾಯ, ವಲಯದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಆದರೆ ಯಾವ ಜಾತಿ, ಮತಕ್ಕೆ ಸೇರಿದ್ದಾರೆಂದು ತಿಳಿದುಕೊಂಡು ಮಾತನಾಡುತ್ತೇವೆ ಮತ್ತು ವರ್ತಿಸುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಮಾತನಾಡಿ, ‘ತರಕಾರಿ ಮಾರುವ, ಟಿ.ವಿ. ಹಾಗೂ ವಾಷಿಂಗ್ ಮಷಿನ್ ದುರಸ್ತಿಗೊಳಿಸುವ ಶಿವಕುಮಾರಗೌಡ ಅವರು ಶ್ರಮಜೀವಿಗಳಾಗಿದ್ದು, ಅವರ ಬರವಣಿಗೆಯೂ ಶ್ರಮಜೀವಿಗಳ ಕುರಿತೇ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ನಮ್ಮ ರಾಜ್ಯವನ್ನು ಕುಂಕುಮ, ವಿಭೂತಿ ನುಂಗುತ್ತಿವೆ. ಲಾಂಛನಗಳ ಆಕ್ರಮಣಗಳು ನಡೆದಾಗ ನೋಡಿಕೊಂಡು ಸುಮ್ಮನಿರಲಾಗದು’ ಎಂದರು.</p>.<p>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಸಣ್ಣ ಸಣ್ಣ ಸಮುದಾಯಗಳು ನಿಧಾನವಾಗಿ ಸಾಯುತ್ತಿವೆ. ಅವುಗಳ ಭಾಷೆಯೂ ಸಾಯುತ್ತಿದೆ. ಮುಂದಿನ 60 ವರ್ಷಗಳಲ್ಲಿ ಶೇ 80ರಷ್ಟು ಭಾಷಿಕರು ಶೇ 20ರಷ್ಟು ಜನರ ಭಾಷೆಯನ್ನು ಬಳಸುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಕಥೆಗಾರ ವಸುಧೇಂದ್ರ ಕೃತಿ ಪರಿಚಯಿಸಿದರು. ಲೇಖಕ ಗೌಡ್ರ ಶಿವಕುಮಾರಗೌಡ, ಪ್ರಕಾಶಕ ಲಕ್ಷ್ಮಣ್ ಈಟಿ, ಸಂಸದೀಯ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕ.ನಾ. ವಿಜಯಕುಮಾರ್ ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೇರೆ ಬೇರೆ ವಲಯ, ವರ್ಗ, ಸಮುದಾಯದವರು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಶಕ್ತಿ ಹೆಚ್ಚಿಸಿದ್ದಾರೆ. ಸಾಹಿತ್ಯಕ್ಕೆ ಮಹತ್ವ ತಂದುಕೊಟ್ಟಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಬುಧವಾರ ಹೂವಿನಹಡಗಲಿಯ ಏಳುಕೋಟಿ ಪ್ರಕಾಶನವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌಡ್ರ ಶಿವಕುಮಾರಗೌಡ ಅವರ ‘ನಾ ಕಂಡ ಸಮಾಜ ಮತ್ತು ಸಮಸ್ಯೆಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಬೇರೆ ಬೇರೆ ಸಮುದಾಯ, ವಲಯದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಆದರೆ ಯಾವ ಜಾತಿ, ಮತಕ್ಕೆ ಸೇರಿದ್ದಾರೆಂದು ತಿಳಿದುಕೊಂಡು ಮಾತನಾಡುತ್ತೇವೆ ಮತ್ತು ವರ್ತಿಸುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಮಾತನಾಡಿ, ‘ತರಕಾರಿ ಮಾರುವ, ಟಿ.ವಿ. ಹಾಗೂ ವಾಷಿಂಗ್ ಮಷಿನ್ ದುರಸ್ತಿಗೊಳಿಸುವ ಶಿವಕುಮಾರಗೌಡ ಅವರು ಶ್ರಮಜೀವಿಗಳಾಗಿದ್ದು, ಅವರ ಬರವಣಿಗೆಯೂ ಶ್ರಮಜೀವಿಗಳ ಕುರಿತೇ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ನಮ್ಮ ರಾಜ್ಯವನ್ನು ಕುಂಕುಮ, ವಿಭೂತಿ ನುಂಗುತ್ತಿವೆ. ಲಾಂಛನಗಳ ಆಕ್ರಮಣಗಳು ನಡೆದಾಗ ನೋಡಿಕೊಂಡು ಸುಮ್ಮನಿರಲಾಗದು’ ಎಂದರು.</p>.<p>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಸಣ್ಣ ಸಣ್ಣ ಸಮುದಾಯಗಳು ನಿಧಾನವಾಗಿ ಸಾಯುತ್ತಿವೆ. ಅವುಗಳ ಭಾಷೆಯೂ ಸಾಯುತ್ತಿದೆ. ಮುಂದಿನ 60 ವರ್ಷಗಳಲ್ಲಿ ಶೇ 80ರಷ್ಟು ಭಾಷಿಕರು ಶೇ 20ರಷ್ಟು ಜನರ ಭಾಷೆಯನ್ನು ಬಳಸುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಕಥೆಗಾರ ವಸುಧೇಂದ್ರ ಕೃತಿ ಪರಿಚಯಿಸಿದರು. ಲೇಖಕ ಗೌಡ್ರ ಶಿವಕುಮಾರಗೌಡ, ಪ್ರಕಾಶಕ ಲಕ್ಷ್ಮಣ್ ಈಟಿ, ಸಂಸದೀಯ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕ.ನಾ. ವಿಜಯಕುಮಾರ್ ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>