ಪ್ರಕರಣದ ವಿವರ: ‘ಶಾಖೆಯ ಲಾಕರ್ನಲ್ಲಿದ್ದ ಅಸಲಿ ಆಭರಣಗಳನ್ನು ಕದ್ದಿದ್ದ ಆರೋಪಿಗಳು, ಅದೇ ಜಾಗದಲ್ಲಿ ನಕಲಿ ಆಭರಣ ಇಟ್ಟಿದ್ದರು. ನಂತರ, ಅಸಲಿ ಆಭರಣಗಳನ್ನು ಮಣಪ್ಪುರಂ ಫೈನಾನ್ಸ್ನಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಈ ಮೂಲಕ ಕಂಪನಿಗೆ ₹ 55 ಲಕ್ಷ ವಂಚನೆ ಮಾಡಿದ್ದು ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿತ್ತು. ಸುನಂದಾ, ಶಾಖೆಯ ಗ್ರಾಹಕರ ಸೇವಾ ಪ್ರತಿನಿಧಿಗಳಾದ ಶಿಲ್ಪಾ, ನಿಹಾಲ್ ಅಂಥೋನಿ ರಾಜ್ ಸೇರಿ ಕೃತ್ಯ ಎಸಗಿದ್ದು ಆಂತರಿಕ ತನಿಖೆಯಿಂದ ಬಯಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.