‘ಒಂದು ವರ್ಷದಿಂದ ನೀಡುತ್ತಿರುವ ಊಟದಲ್ಲಿ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಇಂದಿರಾ ಕ್ಯಾಂಟೀನ್ನಿಂದ ಪೌರ ಕಾರ್ಮಿಕರಿಗೆ ದಿನನಿತ್ಯ ಸರಬರಾಜು ಆಗುವ ಊಟ ಸರಿಯಾಗಿ ಬೆಂದಿರುವುದಿಲ್ಲ. ಅದರಲ್ಲಿ ನಿತ್ಯ ಹುಳುಗಳ ದರ್ಶನವಾಗುತ್ತದೆ. ಬದನೆಕಾಯಿ, ಮಂಗಳೂರು ಸೌತೆಕಾಯಿ ಬಿಟ್ಟರೆ ಬೇರೆ ತರಕಾರಿ ಕಾಣುವುದಿಲ್ಲ. ಇಂತಹ ಊಟ ನೀಡುವುದಕ್ಕಿಂತ ನಿಲ್ಲಿಸುವುದೇ ಸೂಕ್ತ’ ಎಂದು ಪೌರ ಕಾರ್ಮಿಕ ಗಾದಿಲಿಂಗಪ್ಪ ತಿಳಿಸಿದರು.