‘ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಯಲ್ಲಿ ₹485 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆ ಮಾರ್ಪಾಟು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕಾಮಗಾರಿಗಳ ಕೋಷ್ಠಕ –2ರಲ್ಲಿ ₹ 1 ಕೋಟಿ ಮೊತ್ತದ ಒಳಗಿನ ಕಾಮಗಾರಿಗಳಿವೆ. ಆದರೆ, ಈ ಎಲ್ಲ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ನಲ್ಲಿ ನಿರ್ವಹಿಸಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಟೆಂಡರ್ನಲ್ಲಿ ಸ್ಪರ್ಧೆ ಏರ್ಪಡುವುದಿಲ್ಲ. ಸರ್ಕಾರದ ಕಾಯ್ದೆಯನ್ನು ಸರ್ಕಾರವೇ ಅನುಸರಿಸದಿರುವುದು ಸಂವಿಧಾನಕ್ಕೆ ಮಾಡುವ ಅವಮಾನ’ ಎಂದು ಮಹದೇವಸ್ವಾಮಿ ದೂರಿದ್ದಾರೆ.