<p><strong>ಬೆಂಗಳೂರು:</strong> ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಕೆನರಾ ರೊಬೆಕೊ’ ಮ್ಯೂಚುವಲ್ ಫಂಡ್ಸ್ ಸಹಯೋಗದೊಂದಿಗೆ ಜನವರಿ 12 ರಂದು ಸಂಜೆ 4 ಗಂಟೆಗೆ ಹಣಕಾಸು ತಜ್ಞರಿಂದ ‘ಸ್ಮಾರ್ಟ್ ಟುಮಾರೊ– ಹೂಡಿಕೆದಾರರಿಗೆ ಜಾಗೃತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. </p>.<p>ಎಂ.ಜಿ. ರಸ್ತೆಯಲ್ಲಿರುವ ದಿ ಪ್ರಿಂಟರ್ಸ್ ಮೈಸೂರು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ, ಬಂಡವಾಳ ಮಾರುಕಟ್ಟೆಯಲ್ಲಿ ಅಪಾಯಗಳ ನಿರ್ವಹಣೆ, ಮಾರುಕಟ್ಟೆ ಒಳಸುಳಿವು ಮತ್ತು ಹಣಕಾಸು ಯೋಜನೆ, ಕಾಲಕಾಲಕ್ಕೆ ಶಿಸ್ತುಬದ್ದ ಹೂಡಿಕೆಗಳ ಬಗ್ಗೆ ಆರ್ಥಿಕ ಪರಿಣತರು ಮಾಹಿತಿ ನೀಡುವರು. </p>.<p>ಇತ್ತೀಚಿನ ಸುಲಭ ಹೂಡಿಕೆ ವಿಧಾನ ಮತ್ತು ಹಿಂಪಡೆಯುವಿಕೆ ಆಯ್ಕೆಗಳ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ನೋಂದಣಿ ಮಾಡಿಕೊಳ್ಳಬಹುದು. 60 ರಿಂದ 90 ನಿಮಿಷದ ಅವಧಿಯ ಉಪನ್ಯಾಸ ಕಾರ್ಯಕ್ರಮವನ್ನು ‘ಕೆನರಾ ರೊಬೆಕೊ’ ವಲಯ ಮಾರಾಟ ವಿಭಾಗದ ಮುಖ್ಯಸ್ಥ ಸದಾನಂದ ಪ್ಯಾಟಿ ನಿರ್ವಹಿಸುವರು.</p>.<p>ಇದು ರಾಜ್ಯದಲ್ಲಿ ನಡೆಯುತ್ತಿರುವ 4ನೇ ಆವೃತ್ತಿಯ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ. ಮಾಹಿತಿಗೆ 7338018541 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಕೆನರಾ ರೊಬೆಕೊ’ ಮ್ಯೂಚುವಲ್ ಫಂಡ್ಸ್ ಸಹಯೋಗದೊಂದಿಗೆ ಜನವರಿ 12 ರಂದು ಸಂಜೆ 4 ಗಂಟೆಗೆ ಹಣಕಾಸು ತಜ್ಞರಿಂದ ‘ಸ್ಮಾರ್ಟ್ ಟುಮಾರೊ– ಹೂಡಿಕೆದಾರರಿಗೆ ಜಾಗೃತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. </p>.<p>ಎಂ.ಜಿ. ರಸ್ತೆಯಲ್ಲಿರುವ ದಿ ಪ್ರಿಂಟರ್ಸ್ ಮೈಸೂರು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ, ಬಂಡವಾಳ ಮಾರುಕಟ್ಟೆಯಲ್ಲಿ ಅಪಾಯಗಳ ನಿರ್ವಹಣೆ, ಮಾರುಕಟ್ಟೆ ಒಳಸುಳಿವು ಮತ್ತು ಹಣಕಾಸು ಯೋಜನೆ, ಕಾಲಕಾಲಕ್ಕೆ ಶಿಸ್ತುಬದ್ದ ಹೂಡಿಕೆಗಳ ಬಗ್ಗೆ ಆರ್ಥಿಕ ಪರಿಣತರು ಮಾಹಿತಿ ನೀಡುವರು. </p>.<p>ಇತ್ತೀಚಿನ ಸುಲಭ ಹೂಡಿಕೆ ವಿಧಾನ ಮತ್ತು ಹಿಂಪಡೆಯುವಿಕೆ ಆಯ್ಕೆಗಳ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ನೋಂದಣಿ ಮಾಡಿಕೊಳ್ಳಬಹುದು. 60 ರಿಂದ 90 ನಿಮಿಷದ ಅವಧಿಯ ಉಪನ್ಯಾಸ ಕಾರ್ಯಕ್ರಮವನ್ನು ‘ಕೆನರಾ ರೊಬೆಕೊ’ ವಲಯ ಮಾರಾಟ ವಿಭಾಗದ ಮುಖ್ಯಸ್ಥ ಸದಾನಂದ ಪ್ಯಾಟಿ ನಿರ್ವಹಿಸುವರು.</p>.<p>ಇದು ರಾಜ್ಯದಲ್ಲಿ ನಡೆಯುತ್ತಿರುವ 4ನೇ ಆವೃತ್ತಿಯ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ. ಮಾಹಿತಿಗೆ 7338018541 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>