ಈ ಸಮ್ಮೇಳನದ ಸ್ವರೂಪ ಹೇಗಿರಬೇಕು? ಎಷ್ಟು ಗೋಷ್ಠಿಗಳು, ಯಾವ ಯಾವ ವಿಷಯದ ಬಗ್ಗೆ ಇರಬೇಕು? ಯಾವ ಮಾದರಿಯ ಪುಸ್ತಕಗಳು ಪ್ರಕಟವಾಗಬೇಕು? ಸನ್ಮಾನಕ್ಕೆ ಅರ್ಹರು ಯಾರು? ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ವರೂಪ ಹೇಗಿರಬೇಕು? ಮೊದಲಾದ ವಿಷಯಗಳ ಕುರಿತು ಸಾರ್ವಜನಿಕರು ಅಭಿಪ್ರಾಯಗಳನ್ನು ನೀಡಬಹುದು. ಸಲಹೆ ನೀಡುವವರು ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ ವಿಳಾಸವನ್ನು ತಿಳಿಸಬೇಕು. ಸೆ.30ರ ಒಳಗೆ ‘ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018’ ಇಲ್ಲಿಗೆ ಕಳುಹಿಸಲು ಕೋರಿದ್ದಾರೆ.