<p><strong>ಬೆಂಗಳೂರು:</strong> ಜಾಲಹಳ್ಳಿ ಕ್ರಾಸ್ನಲ್ಲಿ ಪ್ರಯಾಣಿಕರು ಸಂಚಾರ ದಟ್ಟಣೆ ‘ಜಾಲ’ದಲ್ಲಿ ಸಿಲುಕಿ ಪಡಿಪಾಟಲು ಎದುರಿಸುವುದನ್ನು ತಪ್ಪಿಸಲು, ಗ್ರೇಡ್ ಸೆಪರೇಟರ್ (ಅಂಡರ್ ಪಾಸ್) ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ₹57.22 ಕೋಟಿ ಮೊತ್ತದ ಈ ಯೋಜನೆಯ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ.</p>.<p>ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಿಜಿಬಿ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆಯನ್ನೂ ನೀಡಲಾಗಿದೆ. 2023ರ ಮೇ 31ರ ವೇಳೆಗೆ ಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಿ ಗುತ್ತಿಗೆದಾರರಿಗೆ ಕಾಮಗಾರಿಗೆ ಅನುಮತಿ ಪತ್ರವನ್ನೂ ಬಿಬಿಎಂಪಿ ನೀಡಿದೆ.</p>.<p><strong>ಸಿಗ್ನಲ್ರಹಿತ ಜಂಕ್ಷನ್:</strong> ಸದಾ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುವ ಜಾಲಹಳ್ಳಿ ಕ್ರಾಸ್, ಕಾಮಗಾರಿ ಪೂರ್ಣಗೊಂಡ ಬಳಿಕ ಸಿಗ್ನಲ್ ರಹಿತ ಜಂಕ್ಷನ್ ಆಗಲಿದೆ.ಬಿಬಿಎಂಪಿ ರೂಪಿಸಿರುವ ಯೋಜನೆ ಪ್ರಕಾರ,ಪೀಣ್ಯ ರಸ್ತೆ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ<br />ಗಳಲ್ಲಿ (ಸುಬ್ರತೊ ಮುಖರ್ಜಿ ರಸ್ತೆ) ಅಂಡರ್ ಪಾಸ್ ನಿರ್ಮಾಣವಾಗಲಿದೆ. ಎರಡೂ ಕಡೆಯ ವಾಹನಗಳು ಅಂಡರ್ ಪಾಸ್ ಮೂಲಕ ನೇರವಾಗಿ ಹಾದುಹೋಗಬಹುದು. ತುಮಕೂರು ಕಡೆಗೆ ಅಥವಾ ಗೊರಗುಂಟೆಪಾಳ್ಯದ ಕಡೆಗೆ ಹೋಗಬೇಕಿರುವ ವಾಹನಗಳು ಅಂಡರ್ ಪಾಸ್ ಪ್ರವೇಶಿಸದೇ ಮೇಲ್ಭಾಗದಲ್ಲಿ ಚಲಿಸಲಿವೆ.</p>.<p><strong>ನೀರು ನಿಲ್ಲುವುದಿಲ್ಲ: </strong>ಅಂಡರ್ ಪಾಸ್ಗಳಲ್ಲಿ ಮಳೆ ಬಂದಾಗನೀರು ತುಂಬಿಕೊಳ್ಳುವುದು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಆದರೆ, ಜಾಲಹಳ್ಳಿಯ ಕೆಳಸೇತುವೆಯಲ್ಲಿ ನೀರು ನಿಲ್ಲಲು ಅವಕಾಶವೇ ಇಲ್ಲ. ಇಳಿಜಾರಿನ ಕಡೆಗೆ ಒಳಚರಂಡಿ ಇರುವ ಕಾರಣ ನೀರು ಸರಾಗವಾಗಿಹರಿದು ಹೋಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಪಾದಚಾರಿಗಳಿಗೆ ಸ್ಕೈವಾಕ್:</strong>ಈ ಜಂಕ್ಷನ್ನಲ್ಲಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ. ಅಂಡರ್ ಪಾಸ್ ನಿರ್ಮಾಣದ ಜೊತೆಗೆ ಪಾದಚಾರಿಗಳ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ.</p>.<p>ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ ಕಡೆಯಿಂದ ಪೀಣ್ಯ ರಸ್ತೆ ಕಡೆಗೆ ಕೇಬಲ್ ಡಕ್ಟ್ ಮಾದರಿಯ ಪಾದಚಾರಿ ಮಾರ್ಗವೂ ನಿರ್ಮಾಣವಾಗಲಿದೆ. ಪಾದಚಾರಿ ಒಂದುಕಡೆ ಹತ್ತಿದರೆಯಾವ ಕಡೆಗೆ ಬೇಕಾದರೂ ಇಳಿಯಬಹುದು. ಈ ರೀತಿಯ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.</p>.<p><strong>ಶೀಘ್ರವೇ ಕಾಮಗಾರಿ ಆರಂಭ</strong></p>.<p>ಗ್ರೇಡ್ ಸೆಪರೇಟರ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಶಾಸಕ ಮುನಿರತ್ನ ಹೇಳಿದರು.</p>.<p>ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಜಿ. ಪರಮೇಶ್ವರ ಅವರನ್ನು ಆಹ್ವಾನಿಸಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು.</p>.<p>ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಕಾಮಗಾರಿ ಮುಗಿದರೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.</p>.<p><strong>ವಾಹನ ಸಂಚಾರ ಬಂದ್ ಇಲ್ಲ</strong></p>.<p>ಕಾಮಗಾರಿ ನಡೆಯುವ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರಬಂದ್ ಮಾಡುವುದಿಲ್ಲ ಎಂದು ಮುನಿರತ್ನ ತಿಳಿಸಿದರು.</p>.<p>ನಮ್ಮ ಮೆಟ್ರೊ ರೈಲು ಮಾರ್ಗಕ್ಕೆ ಸುರಂಗ ಕೊರೆಯುವ ಮಾದರಿಯಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಸುರಂಗ ಕೊರೆಯಲಾಗುತ್ತದೆ. ಹೀಗಾಗಿ ವಾಹನಗಳ ಸಂಚಾರಕ್ಕೆ ಕಾಮಗಾರಿ ಅಡ್ಡಿಯಾಗದು ಎಂದರು.</p>.<p><strong>ಅಂಕಿ ಅಂಶ</strong></p>.<p>* ₹57.22 ಕೋಟಿ – ಕಾಮಗಾರಿಯ ಅಂದಾಜು ಮೊತ್ತ</p>.<p>*24 ತಿಂಗಳು – ಕಾಮಗಾರಿ ಪೂರ್ಣಗೊಳಿಸಲು ವಿಧಿಸಿರುವ ಗಡುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜಾಲಹಳ್ಳಿ ಕ್ರಾಸ್ನಲ್ಲಿ ಪ್ರಯಾಣಿಕರು ಸಂಚಾರ ದಟ್ಟಣೆ ‘ಜಾಲ’ದಲ್ಲಿ ಸಿಲುಕಿ ಪಡಿಪಾಟಲು ಎದುರಿಸುವುದನ್ನು ತಪ್ಪಿಸಲು, ಗ್ರೇಡ್ ಸೆಪರೇಟರ್ (ಅಂಡರ್ ಪಾಸ್) ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ₹57.22 ಕೋಟಿ ಮೊತ್ತದ ಈ ಯೋಜನೆಯ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ.</p>.<p>ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಿಜಿಬಿ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆಯನ್ನೂ ನೀಡಲಾಗಿದೆ. 2023ರ ಮೇ 31ರ ವೇಳೆಗೆ ಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಿ ಗುತ್ತಿಗೆದಾರರಿಗೆ ಕಾಮಗಾರಿಗೆ ಅನುಮತಿ ಪತ್ರವನ್ನೂ ಬಿಬಿಎಂಪಿ ನೀಡಿದೆ.</p>.<p><strong>ಸಿಗ್ನಲ್ರಹಿತ ಜಂಕ್ಷನ್:</strong> ಸದಾ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುವ ಜಾಲಹಳ್ಳಿ ಕ್ರಾಸ್, ಕಾಮಗಾರಿ ಪೂರ್ಣಗೊಂಡ ಬಳಿಕ ಸಿಗ್ನಲ್ ರಹಿತ ಜಂಕ್ಷನ್ ಆಗಲಿದೆ.ಬಿಬಿಎಂಪಿ ರೂಪಿಸಿರುವ ಯೋಜನೆ ಪ್ರಕಾರ,ಪೀಣ್ಯ ರಸ್ತೆ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ<br />ಗಳಲ್ಲಿ (ಸುಬ್ರತೊ ಮುಖರ್ಜಿ ರಸ್ತೆ) ಅಂಡರ್ ಪಾಸ್ ನಿರ್ಮಾಣವಾಗಲಿದೆ. ಎರಡೂ ಕಡೆಯ ವಾಹನಗಳು ಅಂಡರ್ ಪಾಸ್ ಮೂಲಕ ನೇರವಾಗಿ ಹಾದುಹೋಗಬಹುದು. ತುಮಕೂರು ಕಡೆಗೆ ಅಥವಾ ಗೊರಗುಂಟೆಪಾಳ್ಯದ ಕಡೆಗೆ ಹೋಗಬೇಕಿರುವ ವಾಹನಗಳು ಅಂಡರ್ ಪಾಸ್ ಪ್ರವೇಶಿಸದೇ ಮೇಲ್ಭಾಗದಲ್ಲಿ ಚಲಿಸಲಿವೆ.</p>.<p><strong>ನೀರು ನಿಲ್ಲುವುದಿಲ್ಲ: </strong>ಅಂಡರ್ ಪಾಸ್ಗಳಲ್ಲಿ ಮಳೆ ಬಂದಾಗನೀರು ತುಂಬಿಕೊಳ್ಳುವುದು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಆದರೆ, ಜಾಲಹಳ್ಳಿಯ ಕೆಳಸೇತುವೆಯಲ್ಲಿ ನೀರು ನಿಲ್ಲಲು ಅವಕಾಶವೇ ಇಲ್ಲ. ಇಳಿಜಾರಿನ ಕಡೆಗೆ ಒಳಚರಂಡಿ ಇರುವ ಕಾರಣ ನೀರು ಸರಾಗವಾಗಿಹರಿದು ಹೋಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಪಾದಚಾರಿಗಳಿಗೆ ಸ್ಕೈವಾಕ್:</strong>ಈ ಜಂಕ್ಷನ್ನಲ್ಲಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ. ಅಂಡರ್ ಪಾಸ್ ನಿರ್ಮಾಣದ ಜೊತೆಗೆ ಪಾದಚಾರಿಗಳ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ.</p>.<p>ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ ಕಡೆಯಿಂದ ಪೀಣ್ಯ ರಸ್ತೆ ಕಡೆಗೆ ಕೇಬಲ್ ಡಕ್ಟ್ ಮಾದರಿಯ ಪಾದಚಾರಿ ಮಾರ್ಗವೂ ನಿರ್ಮಾಣವಾಗಲಿದೆ. ಪಾದಚಾರಿ ಒಂದುಕಡೆ ಹತ್ತಿದರೆಯಾವ ಕಡೆಗೆ ಬೇಕಾದರೂ ಇಳಿಯಬಹುದು. ಈ ರೀತಿಯ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.</p>.<p><strong>ಶೀಘ್ರವೇ ಕಾಮಗಾರಿ ಆರಂಭ</strong></p>.<p>ಗ್ರೇಡ್ ಸೆಪರೇಟರ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಶಾಸಕ ಮುನಿರತ್ನ ಹೇಳಿದರು.</p>.<p>ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಜಿ. ಪರಮೇಶ್ವರ ಅವರನ್ನು ಆಹ್ವಾನಿಸಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು.</p>.<p>ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಕಾಮಗಾರಿ ಮುಗಿದರೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.</p>.<p><strong>ವಾಹನ ಸಂಚಾರ ಬಂದ್ ಇಲ್ಲ</strong></p>.<p>ಕಾಮಗಾರಿ ನಡೆಯುವ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರಬಂದ್ ಮಾಡುವುದಿಲ್ಲ ಎಂದು ಮುನಿರತ್ನ ತಿಳಿಸಿದರು.</p>.<p>ನಮ್ಮ ಮೆಟ್ರೊ ರೈಲು ಮಾರ್ಗಕ್ಕೆ ಸುರಂಗ ಕೊರೆಯುವ ಮಾದರಿಯಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಸುರಂಗ ಕೊರೆಯಲಾಗುತ್ತದೆ. ಹೀಗಾಗಿ ವಾಹನಗಳ ಸಂಚಾರಕ್ಕೆ ಕಾಮಗಾರಿ ಅಡ್ಡಿಯಾಗದು ಎಂದರು.</p>.<p><strong>ಅಂಕಿ ಅಂಶ</strong></p>.<p>* ₹57.22 ಕೋಟಿ – ಕಾಮಗಾರಿಯ ಅಂದಾಜು ಮೊತ್ತ</p>.<p>*24 ತಿಂಗಳು – ಕಾಮಗಾರಿ ಪೂರ್ಣಗೊಳಿಸಲು ವಿಧಿಸಿರುವ ಗಡುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>