<p><strong>ಬೆಂಗಳೂರು</strong>: ಕರ್ನಾಟಕ ಜಾನಪದ ಅಕಾಡೆಮಿಯು ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಫೆಲೋಶಿಪ್ಗೆ ಅರ್ಜಿ ಆಹ್ವಾನಿಸಿದೆ. </p>.<p>ಆಯ್ಕೆಯಾದವರು ಐದು ತಿಂಗಳ ಒಳಗೆ ಅಧ್ಯಯನ ಪೂರ್ಣಗೊಳಿಸಬೇಕು. ಪ್ರತಿ ಸಂಶೋಧಕ ಅಥವಾ ಅಧ್ಯಯನಕಾರರಿಗೆ ₹70 ಸಾವಿರ ಹಾಗೂ ಮಾರ್ಗದರ್ಶಕರಿಗೆ ₹5 ಸಾವಿರ ನೀಡಲಾಗುತ್ತದೆ.</p>.<p>ಫೆಲೋಶಿಪ್ಗೆ ಸಾಮಾನ್ಯ ಯೋಜನೆಯಡಿ ಒಬ್ಬರು, ಪರಿಶಿಷ್ಟ ಜಾತಿಯಡಿ ಐವರು ಮತ್ತು ಪರಿಶಿಷ್ಟ ಪಂಗಡದಡಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇದಕ್ಕೆ ಸಂಬಂಧಿಸಿದ ವಿವರಗಳು ಅಕಾಡೆಮಿ ವೆಬ್ಸೈಟ್ <a href="https://janapada.karnataka.gov.in/">https://janapada.karnataka.gov.in/</a> ನಲ್ಲಿ ಲಭ್ಯ. </p>.<p>ಅರ್ಹ ಅಭ್ಯರ್ಥಿಗಳು ಇದೇ 23ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು– 560002ಕ್ಕೆ ಕಳುಹಿಸಬೇಕು. ಸಂದರ್ಶನದ ಮುಖೇನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಜಾನಪದ ಅಕಾಡೆಮಿಯು ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಫೆಲೋಶಿಪ್ಗೆ ಅರ್ಜಿ ಆಹ್ವಾನಿಸಿದೆ. </p>.<p>ಆಯ್ಕೆಯಾದವರು ಐದು ತಿಂಗಳ ಒಳಗೆ ಅಧ್ಯಯನ ಪೂರ್ಣಗೊಳಿಸಬೇಕು. ಪ್ರತಿ ಸಂಶೋಧಕ ಅಥವಾ ಅಧ್ಯಯನಕಾರರಿಗೆ ₹70 ಸಾವಿರ ಹಾಗೂ ಮಾರ್ಗದರ್ಶಕರಿಗೆ ₹5 ಸಾವಿರ ನೀಡಲಾಗುತ್ತದೆ.</p>.<p>ಫೆಲೋಶಿಪ್ಗೆ ಸಾಮಾನ್ಯ ಯೋಜನೆಯಡಿ ಒಬ್ಬರು, ಪರಿಶಿಷ್ಟ ಜಾತಿಯಡಿ ಐವರು ಮತ್ತು ಪರಿಶಿಷ್ಟ ಪಂಗಡದಡಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇದಕ್ಕೆ ಸಂಬಂಧಿಸಿದ ವಿವರಗಳು ಅಕಾಡೆಮಿ ವೆಬ್ಸೈಟ್ <a href="https://janapada.karnataka.gov.in/">https://janapada.karnataka.gov.in/</a> ನಲ್ಲಿ ಲಭ್ಯ. </p>.<p>ಅರ್ಹ ಅಭ್ಯರ್ಥಿಗಳು ಇದೇ 23ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು– 560002ಕ್ಕೆ ಕಳುಹಿಸಬೇಕು. ಸಂದರ್ಶನದ ಮುಖೇನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>