<p><strong>ಬೆಂಗಳೂರು:</strong> ಕೊಳಚೆನೀರು, ಕಳೆ ಸಸ್ಯಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಕಗ್ಗದಾಸಪುರ ಕೆರೆ ಉಳಿಸುವ ಪ್ರಯತ್ನ ಕೊನೆಗೂ ಆರಂಭವಾಗಿದೆ.</p>.<p>ಈ ಕೆರೆಯ ಮೂಲೆಯೊಂದರಲ್ಲಿ ತ್ಯಾಜ್ಯನೀರು ಸಂಸ್ಕರಣ ಘಟಕವೊಂದನ್ನು(ಎಸ್ಟಿಪಿ) ನಿರ್ಮಿಸುವ ಮೂಲಕ ಜಲಮಾಲಿನ್ಯ ತಡೆಯಲು, ಕೆರೆ ಹಾಗೂ ಜಲಚರಗಳ ಜೀವ ಉಳಿಸಲು, ಸುತ್ತಲಿನ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಎಸ್ಟಿಪಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ.</p>.<p>ರಾಜಕಾಲುವೆ ಇರುವಕೆರೆಯ ಉತ್ತರ ಭಾಗದಲ್ಲಿ ಎಸ್ಟಿಪಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದನ್ನು ನಿರ್ಮಾಣ ಮಾಡುವ ಗುತ್ತಿಗೆದಾರರೇ ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡುವ ಕರಾರನ್ನು ಟೆಂಡರ್ನಲ್ಲಿ ಸೇರಿಸಲಾಗಿದೆ.</p>.<p>‘ತ್ಯಾಜ್ಯನೀರು ಸಂಸ್ಕರಣೆಗೊಂಡ ಬಳಿಕ ಅದರಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಭಾರಲೋಹಗಳು ಬೇರ್ಪಡುತ್ತವೆ. ಜಲಚರಗಳ ಆವಾಸಕ್ಕೆ ಬೇಕಾಗುವಷ್ಟು ಆಮ್ಲಜನಕ ಪ್ರಮಾಣ (ಬಯೋಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್) ನೀರಿನಲ್ಲಿ ಇರಲಿದೆ. ಇದರಿಂದ ಕೆರೆಯಲ್ಲಿ ಕಳೆ ಸಸ್ಯಗಳು ಬೆಳೆಯುವುದಿಲ್ಲ’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಕಳೆದ ವರ್ಷದ ಜೂನ್ನಲ್ಲಿ ಈ ಪ್ರದೇಶಕ್ಕೆ ನೀಡಿದ್ದಾಗ ಸ್ಥಳೀಯರು ಕೆರೆ ಅಭಿವೃದ್ಧಿಗೆ ಮನವಿ ಮಾಡಿದ್ದರು.</p>.<p><strong>ಕೆರೆಯ ಸದ್ಯದ ಸ್ಥಿತಿ:</strong> ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಕಗ್ಗದಾಸಪುರ ಕೆರೆಯಲ್ಲಿಕೊಳಚೆನೀರು ನಿಂತಿದೆ.</p>.<p>ಜೊಂಡುಹುಲ್ಲು ಬೆಳೆದಿದೆ. ಸುತ್ತಲಿನ ನಾಗವಾರಪಾಳ್ಯ, ಭುವನೇಶ್ವರಿ ನಗರ, ಬೆನ್ನಿಗಾನಹಳ್ಳಿ, ಬೈರಸಂದ್ರ, ಮಲ್ಲೇಶಪಾಳ್ಯ, ಜಿ.ಎಂ.ಪಾಳ್ಯ, ಕಗ್ಗದಾಸಪುರ, ವಾರ್ಸೊವಾ ಬಡಾವಣೆಯ ತ್ಯಾಜ್ಯನೀರು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ಸಾರ್ವಜನಿಕರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದುರ್ವಾಸನೆಯೂ ಹರಡುತ್ತಿದೆ.</p>.<p><strong>ಅಂಕಿ–ಅಂಶ</strong><br /><strong>37 ಎಕರೆ:</strong>ಕಗ್ಗದಾಸಪುರ ಕೆರೆಯ ವಿಸ್ತೀರ್ಣ<br /><strong>2 ಎಕರೆ:</strong>ಕೊಳಚೆನೀರು ಸಂಸ್ಕರಣ ಘಟಕ ನಿರ್ಮಾಣಗೊಳ್ಳುವ ಪ್ರದೇಶ<br /><strong>50 ಲಕ್ಷ ಲೀಟರ್:</strong>ಎಸ್ಟಿಪಿಯಲ್ಲಿ ಪ್ರತಿದಿನ ಸಂಸ್ಕರಣೆಗೊಳ್ಳುವ ಕೊಳಚೆನೀರಿನ ಪ್ರಮಾಣ<br /><strong>₹ 20 ಕೋಟಿ:</strong>ಜಲಮಂಡಳಿ ನಿಗದಿಪಡಿಸಿರುವ ಟೆಂಡರ್ ಮೊತ್ತ<br /><strong>18 ತಿಂಗಳು:</strong>ಕಾಮಗಾರಿ ಮುಗಿಸಲು ನಿಗದಿ ಪಡಿಸಿರುವ ಗಡುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊಳಚೆನೀರು, ಕಳೆ ಸಸ್ಯಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಕಗ್ಗದಾಸಪುರ ಕೆರೆ ಉಳಿಸುವ ಪ್ರಯತ್ನ ಕೊನೆಗೂ ಆರಂಭವಾಗಿದೆ.</p>.<p>ಈ ಕೆರೆಯ ಮೂಲೆಯೊಂದರಲ್ಲಿ ತ್ಯಾಜ್ಯನೀರು ಸಂಸ್ಕರಣ ಘಟಕವೊಂದನ್ನು(ಎಸ್ಟಿಪಿ) ನಿರ್ಮಿಸುವ ಮೂಲಕ ಜಲಮಾಲಿನ್ಯ ತಡೆಯಲು, ಕೆರೆ ಹಾಗೂ ಜಲಚರಗಳ ಜೀವ ಉಳಿಸಲು, ಸುತ್ತಲಿನ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಎಸ್ಟಿಪಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ.</p>.<p>ರಾಜಕಾಲುವೆ ಇರುವಕೆರೆಯ ಉತ್ತರ ಭಾಗದಲ್ಲಿ ಎಸ್ಟಿಪಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದನ್ನು ನಿರ್ಮಾಣ ಮಾಡುವ ಗುತ್ತಿಗೆದಾರರೇ ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡುವ ಕರಾರನ್ನು ಟೆಂಡರ್ನಲ್ಲಿ ಸೇರಿಸಲಾಗಿದೆ.</p>.<p>‘ತ್ಯಾಜ್ಯನೀರು ಸಂಸ್ಕರಣೆಗೊಂಡ ಬಳಿಕ ಅದರಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಭಾರಲೋಹಗಳು ಬೇರ್ಪಡುತ್ತವೆ. ಜಲಚರಗಳ ಆವಾಸಕ್ಕೆ ಬೇಕಾಗುವಷ್ಟು ಆಮ್ಲಜನಕ ಪ್ರಮಾಣ (ಬಯೋಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್) ನೀರಿನಲ್ಲಿ ಇರಲಿದೆ. ಇದರಿಂದ ಕೆರೆಯಲ್ಲಿ ಕಳೆ ಸಸ್ಯಗಳು ಬೆಳೆಯುವುದಿಲ್ಲ’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಕಳೆದ ವರ್ಷದ ಜೂನ್ನಲ್ಲಿ ಈ ಪ್ರದೇಶಕ್ಕೆ ನೀಡಿದ್ದಾಗ ಸ್ಥಳೀಯರು ಕೆರೆ ಅಭಿವೃದ್ಧಿಗೆ ಮನವಿ ಮಾಡಿದ್ದರು.</p>.<p><strong>ಕೆರೆಯ ಸದ್ಯದ ಸ್ಥಿತಿ:</strong> ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಕಗ್ಗದಾಸಪುರ ಕೆರೆಯಲ್ಲಿಕೊಳಚೆನೀರು ನಿಂತಿದೆ.</p>.<p>ಜೊಂಡುಹುಲ್ಲು ಬೆಳೆದಿದೆ. ಸುತ್ತಲಿನ ನಾಗವಾರಪಾಳ್ಯ, ಭುವನೇಶ್ವರಿ ನಗರ, ಬೆನ್ನಿಗಾನಹಳ್ಳಿ, ಬೈರಸಂದ್ರ, ಮಲ್ಲೇಶಪಾಳ್ಯ, ಜಿ.ಎಂ.ಪಾಳ್ಯ, ಕಗ್ಗದಾಸಪುರ, ವಾರ್ಸೊವಾ ಬಡಾವಣೆಯ ತ್ಯಾಜ್ಯನೀರು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ಸಾರ್ವಜನಿಕರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದುರ್ವಾಸನೆಯೂ ಹರಡುತ್ತಿದೆ.</p>.<p><strong>ಅಂಕಿ–ಅಂಶ</strong><br /><strong>37 ಎಕರೆ:</strong>ಕಗ್ಗದಾಸಪುರ ಕೆರೆಯ ವಿಸ್ತೀರ್ಣ<br /><strong>2 ಎಕರೆ:</strong>ಕೊಳಚೆನೀರು ಸಂಸ್ಕರಣ ಘಟಕ ನಿರ್ಮಾಣಗೊಳ್ಳುವ ಪ್ರದೇಶ<br /><strong>50 ಲಕ್ಷ ಲೀಟರ್:</strong>ಎಸ್ಟಿಪಿಯಲ್ಲಿ ಪ್ರತಿದಿನ ಸಂಸ್ಕರಣೆಗೊಳ್ಳುವ ಕೊಳಚೆನೀರಿನ ಪ್ರಮಾಣ<br /><strong>₹ 20 ಕೋಟಿ:</strong>ಜಲಮಂಡಳಿ ನಿಗದಿಪಡಿಸಿರುವ ಟೆಂಡರ್ ಮೊತ್ತ<br /><strong>18 ತಿಂಗಳು:</strong>ಕಾಮಗಾರಿ ಮುಗಿಸಲು ನಿಗದಿ ಪಡಿಸಿರುವ ಗಡುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>