ಬೆಂಗಳೂರು: ‘ಮನುಷ್ಯ ಸಹಜವಾಗಿ ವೈಚಾರಿಕ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಆದರೆ, ಅದು ಇನ್ನೊಬ್ಬರ ನಡುವಿನ ಪ್ರೀತಿ ವಿಶ್ವಾಸದ ಕೊಂಡಿಯನ್ನು ಸಡಿಲ ಮಾಡಬಾರದು. ಸಾಹಿತ್ಯದ ಶಕ್ತಿಯಿದೆ ಎಂಬ ಕಾರಣಕ್ಕೆ ಅನೇಕರು ಸಮಾಜವನ್ನು ಒಡೆದು, ವಿಷಬೀಜ ಬಿತ್ತುತ್ತಾರೆ’ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.