ಸಂಗೀತ ವಿದ್ವಾಂಸ ವಿದ್ಯಾಭೂಷಣ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕ ರವಿ ಹೆಗಡೆ, ಯಕ್ಷಗಾನ ಸಂಶೋಧಕ ಆನಂದರಾಮ ಉಪಾಧ್ಯ, ಯಕ್ಷಗಾನ ಪೋಷಕ ಎ. ಪದ್ಮನಾಭ ಕಾರಂತ, ಯುವ ವಿಪ್ರ ವೇದಿಕೆಯ ಸಂಸ್ಥಾಪನಾಧ್ಯಕ್ಷ ಕೃಷ್ಣಮೂರ್ತಿ ಅಡಿಗ, ಕಾಳಿಂಗ ನಾವಡ ಅವರ ಸಹೋದರಿ ಸುಶೀಲ ಉರಾಳ ಹಾಗೂ ಕರಬ ಪ್ರತಿಷ್ಠಾನದ ದೇವರಾಜ ಕರಬಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕಲಾ ಕದಂಬ ಆರ್ಟ್ ಸೆಂಟರ್ನ ಅಧ್ಯಕ್ಷ ಅಂಬರೀಷ್ ಭಟ್ ಹಾಗೂ ನಿರ್ದೇಶಕರಾಧಾಕೃಷ್ಣ ಉರಾಳ ಉಪಸ್ಥಿತರಿರಲಿದ್ದಾರೆ.