ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ, ‘ಬಿಎಂಶ್ರೀ ಪ್ರತಿಮೆ ಜಾಗ ಸ್ವಚ್ಛಗೊಳಿಸಿ, ಬಯಲು ರಂಗಮಂದಿರ ನಿರ್ಮಿಸುವಂತೆಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಉದಯ್ ಗರುಡಾಚಾರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಅದರಂತೆ ಕೆಲವೇ ದಿನಗಳಲ್ಲಿಪ್ರತಿಮೆಗೆ ಸುಂದರಮಂಟಪ ನಿರ್ಮಾಣಗೊಂಡು ಉದ್ಘಾಟನೆಯೂ ಆಗಿದೆ. ಇದಕ್ಕಾಗಿ ವಂದನೆಗಳು. ಆದರೆ,ಮೂಲಕಂಚಿನಪ್ರತಿಮೆಗೆಬಣ್ಣ ಬದಲಿಸುವ ಮೂಲಕ ಅದರ ನೈಜ ಸೌಂದರ್ಯಕ್ಕೆ ಧಕ್ಕೆ ತರಲಾಗಿದ್ದು, ಮೂಲ ಪ್ರತಿಮೆ ಸ್ಥಾಪಿಸಿದವರ ವಿವರಗಳು ಕಾಣದಂತೆ ಬಣ್ಣ ಹಚ್ಚಿರುವುದು ಖಂಡನೀಯ’ ಎಂದು ದೂರಿದ್ದಾರೆ.