<p><strong>ಬೆಂಗಳೂರು:</strong> ‘ಶಾಸನಗಳನ್ನೂ ಬರೆದು ಸಮಕಾಲೀನ ಚರಿತ್ರೆ ದಾಖಲಿಸಿದ ಮೊದಲ ಕವಿ ರನ್ನ’ ಎಂದು ಸಾಹಿತಿ ಬಾಳಾಸಾಹೇಬ ಲೋಕಾಪುರ ಹೇಳಿದರು.</p>.<p>ಜೈನ ಮಿಲನ್ ಬೆಂಗಳೂರು ಸೆಂಟ್ರಲ್ನಿಂದ ಜಯನಗರದ ಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದ ತಿಂಗಳ ಉಪನ್ಯಾಸದಲ್ಲಿ ಮಾತನಾಡಿದರು.</p>.<p>‘ರನ್ನ ಕವಿ ಬರೆದಿರುವ ಸಾಹಸಭೀಮ ವಿಜಯ ಹಾಗೂ ಅಜಿತನಾಥ ಪುರಾಣ ತಿಲಕ ಈ ಎರಡೂ ಕಾವ್ಯಗಳು ಕನ್ನಡ ಸಾಹಿತ್ಯದಲ್ಲಿ ಬಹು ಪ್ರಮುಖವಾಗಿ ಗಮನ ಸೆಳೆಯುವ ಕೃತಿಗಳು. ಜಗತ್ತಿನ ಕ್ರೌರ್ಯವನ್ನು ಕೊನೆಗೊಳಿಸಲು ರನ್ನನ ಎರಡೂ ಕಾವ್ಯಗಳು ಕೆಲಸ ಮಾಡುತ್ತವೆ’ ಎಂದು ತಿಳಿಸಿದರು.</p>.<p>‘ಜೈನಧರ್ಮದ ಕೈಪಿಡಿಯಾದ ಅಜಿತನಾಥ ಪುರಾಣದಲ್ಲಿ ರನ್ನ ದಾಖಲಿಸುವ ಪಂಚಕಲ್ಯಾಣಗಳನ್ನು ಹಾಗೂ ಅಭಿಷೇಕಗಳನ್ನು ಇಂದಿಗೂ ಧಾರ್ಮಿಕ ಕ್ರಿಯೆಯಾಗಿ ಜೈನರು ಆಚರಿಸುತ್ತಿದ್ದಾರೆ. ಅಂತಹ ಪ್ರಥಮಗಳನ್ನು ನೀಡಿದ ಮಹತ್ವದ ಕವಿ ಚಕ್ರವರ್ತಿ ರನ್ನ’ ಎಂದು ನುಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ‘ಜೈನಧರ್ಮ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹು ದೊಡ್ಡದು. ಅಹಿಂಸೆಯನ್ನು ಬಹು ದೊಡ್ಡಮಟ್ಟದಲ್ಲಿ ಆಚರಿಸುತ್ತಿರುವ ಧರ್ಮವಿದು. ಈ ಜಗತ್ತಿಗೆ ಅಹಿಂಸೆ ಇಂದು ಅತ್ಯಂತ ಮುಖ್ಯವಾದದ್ದು’ ಎಂದರು.</p>.<p>ಜೈನ್ ಮಿಲನ್ ಸೆಂಟ್ರಲ್ ಘಟಕದ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಜೈನ ಸಾಹಿತ್ಯ ಸಿರಿ ಸಂಚಾಲಕಿ ಪದ್ಮಿನಿ ನಾಗರಾಜು, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಶಾಸನಗಳನ್ನೂ ಬರೆದು ಸಮಕಾಲೀನ ಚರಿತ್ರೆ ದಾಖಲಿಸಿದ ಮೊದಲ ಕವಿ ರನ್ನ’ ಎಂದು ಸಾಹಿತಿ ಬಾಳಾಸಾಹೇಬ ಲೋಕಾಪುರ ಹೇಳಿದರು.</p>.<p>ಜೈನ ಮಿಲನ್ ಬೆಂಗಳೂರು ಸೆಂಟ್ರಲ್ನಿಂದ ಜಯನಗರದ ಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದ ತಿಂಗಳ ಉಪನ್ಯಾಸದಲ್ಲಿ ಮಾತನಾಡಿದರು.</p>.<p>‘ರನ್ನ ಕವಿ ಬರೆದಿರುವ ಸಾಹಸಭೀಮ ವಿಜಯ ಹಾಗೂ ಅಜಿತನಾಥ ಪುರಾಣ ತಿಲಕ ಈ ಎರಡೂ ಕಾವ್ಯಗಳು ಕನ್ನಡ ಸಾಹಿತ್ಯದಲ್ಲಿ ಬಹು ಪ್ರಮುಖವಾಗಿ ಗಮನ ಸೆಳೆಯುವ ಕೃತಿಗಳು. ಜಗತ್ತಿನ ಕ್ರೌರ್ಯವನ್ನು ಕೊನೆಗೊಳಿಸಲು ರನ್ನನ ಎರಡೂ ಕಾವ್ಯಗಳು ಕೆಲಸ ಮಾಡುತ್ತವೆ’ ಎಂದು ತಿಳಿಸಿದರು.</p>.<p>‘ಜೈನಧರ್ಮದ ಕೈಪಿಡಿಯಾದ ಅಜಿತನಾಥ ಪುರಾಣದಲ್ಲಿ ರನ್ನ ದಾಖಲಿಸುವ ಪಂಚಕಲ್ಯಾಣಗಳನ್ನು ಹಾಗೂ ಅಭಿಷೇಕಗಳನ್ನು ಇಂದಿಗೂ ಧಾರ್ಮಿಕ ಕ್ರಿಯೆಯಾಗಿ ಜೈನರು ಆಚರಿಸುತ್ತಿದ್ದಾರೆ. ಅಂತಹ ಪ್ರಥಮಗಳನ್ನು ನೀಡಿದ ಮಹತ್ವದ ಕವಿ ಚಕ್ರವರ್ತಿ ರನ್ನ’ ಎಂದು ನುಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ‘ಜೈನಧರ್ಮ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹು ದೊಡ್ಡದು. ಅಹಿಂಸೆಯನ್ನು ಬಹು ದೊಡ್ಡಮಟ್ಟದಲ್ಲಿ ಆಚರಿಸುತ್ತಿರುವ ಧರ್ಮವಿದು. ಈ ಜಗತ್ತಿಗೆ ಅಹಿಂಸೆ ಇಂದು ಅತ್ಯಂತ ಮುಖ್ಯವಾದದ್ದು’ ಎಂದರು.</p>.<p>ಜೈನ್ ಮಿಲನ್ ಸೆಂಟ್ರಲ್ ಘಟಕದ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಜೈನ ಸಾಹಿತ್ಯ ಸಿರಿ ಸಂಚಾಲಕಿ ಪದ್ಮಿನಿ ನಾಗರಾಜು, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>