’ನಾನು ಕಾಂಗ್ರೆಸ್ ಬೆಂಬಲಿತ ಸಿಎಂ ಆಗಿದ್ದೆ. ಆಗ ಇನ್ನೊಬ್ಬರ ಹಂಗಿನಲ್ಲಿ ಕೆಲಸ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಅವಮಾನ ಸಹಿಸಿಕೊಂಡೆ. ಈಗ ನೀವು ಪಾವತಿಸುತ್ತಿರುವ ತೆರಿಗೆ ಲೂಟಿಯಾಗುತ್ತಿದೆ‘ ಎಂದು ಹೇಳಿದ ಅವರು, ’ನೆಲ, ಜಲ, ಭಾಷೆ ಬಗ್ಗೆ ಚರ್ಚೆ ಮಾಡಬೇಕು. ಆದರೆ, ಒಂದು ಕಡೆ ಪ್ರವಾಹ, ಬೆಳೆ ನಾಶವಾಗಿದೆ. ಅಲ್ಲಿನ ಜನರ ಕಷ್ಟ ಅರಿತಿದ್ದೇನೆ. ಅವರಿಗೆ ಹೊಸ ಬದುಕು ಕಟ್ಟಿಕೊಡಿ ಎಂದು ಹೇಳುತ್ತಿದ್ದೇನೆ. ಇದನ್ನು ಮಾಧ್ಯಮದವರು ಬೇರೆ ಪಕ್ಷದವರ ಜೊತೆ ಕೈ ಜೋಡಿಸುತ್ತಿದ್ದೇನೆ ಎಂದುಕೊಂಡಿರಬೇಕು' ಎಂದರು.