ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಮಣಿ ಶಂಕರ್ ಅಯ್ಯರ್, ‘ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ಇದಕ್ಕೆ ಕಾರಣವಾದವರಲ್ಲಿ ಡಿ.ಆರ್.ಪಾಟೀಲ ಪ್ರಮುಖರು. ಈ ಹಿಂದೆ ಕರ್ನಾಟಕದಲ್ಲಿ ನೇಮಕಗೊಂಡಿದ್ದ ‘ರಮೇಶ್ ಕುಮಾರ್ ಸಮಿತಿ’ಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 38 ಸಲಹೆಗಳನ್ನು ನೀಡಿದ್ದೆ. ಎಲ್ಲವೂ ಅಂಗೀಕಾರವಾಗಲು ಡಿ.ಆರ್.ಪಾಟೀಲರೇ ಕಾರಣ. ಇಂತಹವರ ಸಮರ್ಪಣಾ ಭಾವದಿಂದಲೇ ಮುಂದಿನ ಕಾಲು ಶತಮಾನದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ’ ಎಂದು ಹೇಳಿದರು.