ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು,ಸ್ವಾತಂತ್ರ್ಯ ಬಂದ ನಂತರ ದೆಹಲಿಯ ಕೆಂಪು ಕೋಟೆಯಲ್ಲಿ ನೆಹರೂ ಅವರು ರಾಷ್ಟ್ರಧ್ವಜ ಹಾರಿಸಬೇಕಿತ್ತು. ಆ ಹೊತ್ತಿನಲ್ಲಿ, ‘ರಾಷ್ಟ್ರಧ್ವಜದಲ್ಲಿ 3 ಬಣ್ಣಗಳಿವೆ. ಮೂರು ಎಂಬುದು ಕೆಡುಕು, ಅದು ಮಾನಸಿಕವಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಯಾರೂ ಹಾರಿಸಬಾರದು’ ಎಂದು ಹೆಡಗೇವಾರ್ ಹೇಳಿದ್ದರು. ಇಂತಹ ಹಿನ್ನೆಲೆ ಹೆಡಗೇವಾರ್ ಅವರದ್ದಾಗಿದೆ. ಹೀಗಿದ್ದರೂ ಹೆಡಗೇವಾರ್ ಭಾಷಣ ವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಎಂದು ಶಿಕ್ಷಣ ಸಚಿವರು ಪ್ರಶ್ನಿಸಿದ್ದಾರೆ. ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರುವುದಷ್ಟೇ ಬಿಜೆಪಿಯವರ ಉದ್ದೇಶ ಎಂದು ಅವರು ಟೀಕಿಸಿದರು.