ಪ್ರಾಣಿ, ಪಕ್ಷಿ, ಜನರಿಗೆ ಹಣ್ಣು, ಹೂವು ಸಿಗಲಿ ಎಂದು ಕನ್ನಲ್ಲಿಯ ವೀರಶೈವ ಲಿಂಗಾಯತ ರುದ್ರಭೂಮಿ ಟ್ರಸ್ಟ್ನವರು ನೇರಳೆ, ಹತ್ತಿ, ಮಾವು, ಸಪೋಟ, ಹಲಸು, ದಾಳಿಂಬೆ, ನೆಲ್ಲಿ, ಸೀಬೆ, ಅರಳಿ ಮರ, ಬೇವು, ಸಂಪಿಗೆ, ಮಲ್ಲಿಗೆ ಸೇರಿದಂತೆ 3,500ಕ್ಕೂ ಹೆಚ್ಚು ಗಿಡಗಳನ್ನು ಐದು ವರ್ಷಗಳ ಹಿಂದೆ ನೆಟ್ಟು ಪೋಷಣೆ ಮಾಡಿಕೊಂಡು ಬಂದಿದ್ದರು. ಈ ಪೈಕಿ ಅರ್ಧದಷ್ಟು ಗಿಡಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.