ಅತಿ ಕಡಿಮೆ ವೆಚ್ಚದ ಒಂದು ವಾರದ ಯಾತ್ರೆಯು ಇದಾಗಿದ್ದು, ರಾಮೇಶ್ವರ ದೇವಾಲಯ, ಭಗವತಿ ದೇವಾಲಯ, ಮೀನಾಕ್ಷಿ ದೇವಾಲಯ, ಅನಂತಪದ್ಮನಾಭ ದೇವಾಲಯಗಳ ದರ್ಶನ ಪಡೆಯಬಹುದು. ಯಾತ್ರೆಯ ಪ್ಯಾಕೇಜ್ ಮೊತ್ತ ₹ 15,000 ಆಗಿದ್ದು, ಕರ್ನಾಟಕ ಸರ್ಕಾರವು ₹ 5,000 ಸಹಾಯಧನ ನೀಡಲಿದೆ. ಯಾತ್ರಿಗಳು ₹ 10,000 ಪಾವತಿಸಬೇಕು. ಯಾತ್ರೆಯ ವಿಶೇಷ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ. ಅಲ್ಲಿ ಯಾತ್ರಿಗಳಿಗೆ ಹತ್ತಲು ಮತ್ತು ಇಳಿಯಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.