ಸಾಹಿತಿ ಕಮಲಾ ಹಂಪನಾ, ‘ಕನ್ನಡಿಗರು ಕನ್ನಡ ಭಾಷೆಯ ಮೂಲಕವೇ ಹೇಗೆ ಜೀವಿಸಬೇಕು ಎಂಬುದನ್ನು ನಾನು ನನ್ನ ಗುರುಗಳಿಂದ ಕಲಿತುಕೊಂಡಿದ್ದೇನೆ. ಒಂದು ಕಾವ್ಯವನ್ನು ಹೇಗೆ ಓದಬೇಕು? ಹಳಗನ್ನಡ ಹಾಗೂ ನಡುಗನ್ನಡವನ್ನು ಅರ್ಥೈಸಿಕೊಳ್ಳುವುದು ಹಾಗೂ ಬೇರೆಯವರೊಂದಿಗೆ ಸಂವಹನ ನಡೆಸುವ ಬಗ್ಗೆ ತೀ.ನಂ. ಶ್ರೀಕಂಠಯ್ಯ, ತಾ.ಸು. ಶ್ಯಾಮರಾಯ ಮತ್ತುಪರಮೇಶ್ವರ ಭಟ್ ಅವರಿಂದ ಕಲಿತುಕೊಂಡೆ’ ಎಂದು ಸ್ಮರಿಸಿಕೊಂಡರು.