‘ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದ ಕಾರಿಯಪ್ಪ, ಗರ್ಭಿಣಿ ಮಾಡಿದ್ದರು. ನಂತರ, ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದರು. ಈ ಬಗ್ಗೆ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದೆ. ಮದುವೆಯಾಗುವುದಾಗಿ ಹೇಳಿದ್ದರಿಂದ ದೂರು ವಾಪಸು ಪಡೆದುಕೊಂಡಿದ್ದೆ. ನಂತರ, ಕಾರಿಯಪ್ಪ ನನ್ನಿಂದ ಹಂತ ಹಂತವಾಗಿ ₹2 ಲಕ್ಷ ಪಡೆದಿದ್ದರು. ಇದುವರೆಗೂ ಕಾರಿಯಪ್ಪ ಮದುವೆಯಾಗಿಲ್ಲ. ಅವರ ತಂದೆ–ತಾಯಿಗೆ ನಾನು ಇಷ್ಟವಿಲ್ಲವೆಂದು ಹೇಳಿ ಹಲ್ಲೆ ಮಾಡಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.