ಸ್ಮಶಾನದಲ್ಲಿ ದೇವಿ ವಿಗ್ರಹ ಪ್ರತಿಷ್ಠಾಪನೆ: ತೆರವು

ಕೆಂಗೇರಿ: ಸ್ಮಶಾನದಲ್ಲಿ ಅಕ್ರಮವಾಗಿ ಪ್ರತಿಷ್ಠಾಪಿಸಲಾಗಿದ್ದ ದೇವರ ವಿಗ್ರಹವನ್ನು ಪೊಲೀಸರ ನೆರವಿನೊಂದಿಗೆ ಆವಲಹಳ್ಳಿ ಗ್ರಾಮಸ್ಥರು ತೆರವುಗೊಳಿಸಿದರು.
‘ಉತ್ತರಹಳ್ಳಿ ಹೋಬಳಿ ವ್ಯಾಪ್ತಿಯ ಆವಲಹಳ್ಳಿ ಸ್ಮಶಾನದಲ್ಲಿ ಕೆಲವು ದಿನಗಳ ಹಿಂದೆ ಕಸ್ತೂರಬಾ ಕಾಲೊನಿ ನಿವಾಸಿಯಾದ ಮಹದೇವಮ್ಮ ಎಂಬುವರು ಕಾಳಿ ದೇವಾಲಯವನ್ನು ನಿರ್ಮಿಸಲೆಂದು ರಾತ್ರೋರಾತ್ರಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದರು. ಮೇಲ್ಚಾವಣಿ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದರು. ದೇವಿ ತಮ್ಮ ಮೇಲೆ ಆವಾಹನೆಯಾಗಿದ್ದಾಳೆ ಎಂದು ಮುಗ್ಧ ಜನರನ್ನು ನಂಬಿಸುವ ಪ್ರಯತ್ನ ನಡೆಸಿದ್ದರು. ಸ್ಮಶಾನ ಭೂಮಿಯಲ್ಲಿ ದೇವಾಲಯ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ನಾವು ಪೊಲೀಸರಿಗೆ ದೂರು ನೀಡಿದ್ದೆವು’ ಎಂದು ಸ್ಥಳೀಯರಾದ ಆರ್. ನಂಜುಂಡಪ್ಪ ಹೇಳಿದರು.
‘ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೂ, ಮಹಾದೇವಮ್ಮ ಅವರು ದೇಗುಲ ನಿರ್ಮಾಣ ಯತ್ನ ಕೈಬಿಟ್ಟಿರಲಿಲ್ಲ. ಸ್ಥಳೀಯರು ಸೇರಿ, ವಿಗ್ರಹವನ್ನು ಹೊರತೆಗೆದು ಮಹಾದೇವಮ್ಮ ಅವರ ಮನೆ ಅಂಗಳಕ್ಕೆ ಸ್ಥಳಾಂತರಿಸಿದರು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.