<p><strong>ಬೆಂಗಳೂರು:</strong> ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ‘ರಿಸ್ಕ್–V’ ತಂತ್ರಜ್ಞಾನದ ಅರಿವು ಅಗತ್ಯ ಎಂದು ಥೇಲ್ಸ್ ಗ್ರೂಪ್ ಮುಖ್ಯ ತಾಂತ್ರಿಕ ಅಧಿಕಾರಿ ಬರ್ನಾರ್ಡ್ ಕ್ವೆಂಡ್ಟ್ ಹೇಳಿದರು.</p>.<p>ರಿಸ್ಕ್–V (ರೆಡ್ಯೂಸ್ ಇನ್ಸ್ಟ್ರಕ್ಷನ್ ಸೆಟ್ ಕಂಪ್ಯೂಟರ್–5) ತಂತ್ರಜ್ಞಾನ ಮತ್ತು ಕಮ್ಯುನಿಟಿ ಆಫ್ ಪ್ರಾಕ್ಟೀಸ್ (ಸಿಒಪಿಐ) ಸಂಬಂಧಿಸಿದಂತೆ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ನಲ್ಲಿ ನಡೆದ ‘ಭವಿಷ್ಯದ ಡಿಜಿಟಲ್ ಕರ್ನಾಟಕ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>ಭಾರತದಲ್ಲಿ ತಾಂತ್ರಿಕ ಜ್ಞಾನ, ಸಾಫ್ಟ್ವೇರ್ ತಂತ್ರಜ್ಞಾನ ಮತ್ತು ಸೃಜನಶೀಲ ಪ್ರತಿಭೆಗಳು ಸಮ್ಮಿಳಿತವಾಗಿವೆ. ನಾವೀನ್ಯ ತಂತ್ರಜ್ಞಾನದ ಕ್ರಾಂತಿಗೆ ಭಾರತವು ಆಧಾರಸ್ತಂಭವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಮಹೀಂದ್ರಾ ಮತ್ತು ಮಹೀಂದ್ರಾ ಉಪಾಧ್ಯಕ್ಷ ಡಾ. ಶಂಕರ್ ವೇಣುಗೋಪಾಲ್ ಮಾತನಾಡಿ, ‘ರಿಸ್ಕ್–V‘ ತಂತ್ರಜ್ಞಾನ ಮೇಲ್ನೋಟಕ್ಕೆ ವಾಹನ ಕ್ಷೇತ್ರಕ್ಕೆ ಸಂಬಂಧ ಪಡುವುದಿಲ್ಲ ಎಂದು ತೋರಿದರೂ ಈ ತಂತ್ರಜ್ಞಾನವು ವಾಹನಗಳ ವಿನ್ಯಾಸ ಆಟೊಮೊಟಿವ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬಳಕೆಯಾಗಲಿದೆ’ ಎಂದು ತಿಳಿಸಿದರು.</p>.<p>ವಿಎಲ್ಎಸ್ಐ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಸತ್ಯ ಗುಪ್ತಾ, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ (ಸಿಜಿಐ) ಅಧ್ಯಕ್ಷ ಡಿ.ಕೆ. ಮೋಹನ್, ಸಿಜಿಐ ಸಿಇಒ ನಿತಿನ್ ಮೋಹನ್, ಸಿಐಟಿ ಪ್ರಾಂಶುಪಾಲರಾದ ಇಂದುಮತಿ ಮತ್ತು ಸಿಸಿಐಆರ್, ಸಿಐಟಿ ನಿರ್ದೇಶಕ ಡಾ.ಸಿರಿಲ್ ಪ್ರಸನ್ನ ರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ‘ರಿಸ್ಕ್–V’ ತಂತ್ರಜ್ಞಾನದ ಅರಿವು ಅಗತ್ಯ ಎಂದು ಥೇಲ್ಸ್ ಗ್ರೂಪ್ ಮುಖ್ಯ ತಾಂತ್ರಿಕ ಅಧಿಕಾರಿ ಬರ್ನಾರ್ಡ್ ಕ್ವೆಂಡ್ಟ್ ಹೇಳಿದರು.</p>.<p>ರಿಸ್ಕ್–V (ರೆಡ್ಯೂಸ್ ಇನ್ಸ್ಟ್ರಕ್ಷನ್ ಸೆಟ್ ಕಂಪ್ಯೂಟರ್–5) ತಂತ್ರಜ್ಞಾನ ಮತ್ತು ಕಮ್ಯುನಿಟಿ ಆಫ್ ಪ್ರಾಕ್ಟೀಸ್ (ಸಿಒಪಿಐ) ಸಂಬಂಧಿಸಿದಂತೆ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ನಲ್ಲಿ ನಡೆದ ‘ಭವಿಷ್ಯದ ಡಿಜಿಟಲ್ ಕರ್ನಾಟಕ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>ಭಾರತದಲ್ಲಿ ತಾಂತ್ರಿಕ ಜ್ಞಾನ, ಸಾಫ್ಟ್ವೇರ್ ತಂತ್ರಜ್ಞಾನ ಮತ್ತು ಸೃಜನಶೀಲ ಪ್ರತಿಭೆಗಳು ಸಮ್ಮಿಳಿತವಾಗಿವೆ. ನಾವೀನ್ಯ ತಂತ್ರಜ್ಞಾನದ ಕ್ರಾಂತಿಗೆ ಭಾರತವು ಆಧಾರಸ್ತಂಭವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಮಹೀಂದ್ರಾ ಮತ್ತು ಮಹೀಂದ್ರಾ ಉಪಾಧ್ಯಕ್ಷ ಡಾ. ಶಂಕರ್ ವೇಣುಗೋಪಾಲ್ ಮಾತನಾಡಿ, ‘ರಿಸ್ಕ್–V‘ ತಂತ್ರಜ್ಞಾನ ಮೇಲ್ನೋಟಕ್ಕೆ ವಾಹನ ಕ್ಷೇತ್ರಕ್ಕೆ ಸಂಬಂಧ ಪಡುವುದಿಲ್ಲ ಎಂದು ತೋರಿದರೂ ಈ ತಂತ್ರಜ್ಞಾನವು ವಾಹನಗಳ ವಿನ್ಯಾಸ ಆಟೊಮೊಟಿವ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬಳಕೆಯಾಗಲಿದೆ’ ಎಂದು ತಿಳಿಸಿದರು.</p>.<p>ವಿಎಲ್ಎಸ್ಐ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಸತ್ಯ ಗುಪ್ತಾ, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ (ಸಿಜಿಐ) ಅಧ್ಯಕ್ಷ ಡಿ.ಕೆ. ಮೋಹನ್, ಸಿಜಿಐ ಸಿಇಒ ನಿತಿನ್ ಮೋಹನ್, ಸಿಐಟಿ ಪ್ರಾಂಶುಪಾಲರಾದ ಇಂದುಮತಿ ಮತ್ತು ಸಿಸಿಐಆರ್, ಸಿಐಟಿ ನಿರ್ದೇಶಕ ಡಾ.ಸಿರಿಲ್ ಪ್ರಸನ್ನ ರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>