ನಾಗರಬಾವಿ: ಉದ್ಯಾನ ಲೋಕಾರ್ಪಣೆ

ರಾಜರಾಜೇಶ್ವರಿನಗರ: ಕೊಟ್ಟಿಗೆಪಾಳ್ಯ ವಾರ್ಡ್ನಲ್ಲಿ ಬೆಟ್ಟದ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ, ರಸ್ತೆಗಳ ಕಾಮಗಾರಿಗೆ ಶಾಸಕ ಮುನಿರತ್ನ ಶನಿವಾರ ಚಾಲನೆ ನೀಡಿದರು.
ಕೊಟ್ಟಿಗೆಪಾಳ್ಯ ವಾರ್ಡ್ನಲ್ಲಿ ನಾಗರಬಾವಿಯಲ್ಲಿ ಬಿಡಿಎ ಬಡಾವಣೆಯ 13ನೇ ಬ್ಲಾಕ್ನಲ್ಲಿ ನಿರ್ಮಿಸಿರುವ ಉದ್ಯಾನ, ಮಕ್ಕಳ ಆಟದ ಮೈದಾನ, ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿದ ಅವರು, ‘ಜನರ ಆರೋಗ್ಯ ಮತ್ತು ನೆಮ್ಮದಿಗಾಗಿ ಉದ್ಯಾನ ನಿರ್ಮಿಸಿದ್ದೇವೆ. ದೇವಾಲಯಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯವನ್ನೂ ಕೈಗೆತ್ತಿಕೊಂಡಿದ್ದೇವೆ. ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನೂ ಹಂತ ಹಂತವಾಗಿ ಜೀರ್ಣೋದ್ಧಾರಗೊಳಿಸುತ್ತೇವೆ’ ಎಂದರು.
ಸ್ಥಳೀಯ ಮುಖಂಡರಾದ ಎಸ್.ವೆಂಕಟೇಶ್ಬಾಬು, ಜಿ.ಮೋಹನ್ಕುಮಾರ್, ಎಂ.ಮಂಜುನಾಥ್, ರವಿಗೌಡ, ಕೆಂಗುಂಟೆ ಕಾಳೇಗೌಡ, ಜಿ.ಮಾರುತಿ, ಕೃಷ್ಣಮೂರ್ತಿ, ಸಿ.ಪ್ರೇಮ್ಮುರಳಿ, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಜಿ.ಉಮೇಶ್, ಮಿಥುನ್, ನಾಗರಿಕ ವೇದಿಕೆ ಅಧ್ಯಕ್ಷ ಎಸ್.ಕೆ.ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.