ನೊಂದ ಅಭ್ಯರ್ಥಿ ಆಯೇಷಾ,‘2017ರಲ್ಲಿ ನಡೆದ ಮುಖ್ಯ ಪರೀಕ್ಷೆಯ ತಾತ್ಕಾಲಿಕ ಪಟ್ಟಿಯನ್ನು ಎರಡೂವರೆ ವರ್ಷಗಳ ಬಳಿಕ ಪ್ರಕಟಿಸಿತು. ಆದರೆ, ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನವಷ್ಟೇ ಕಾಲಾವಕಾಶ ನೀಡಿತು. ಅದರಲ್ಲಿ ಮೂರು ದಿನ ಕೋರ್ಟ್ ಹಾಗೂಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ರಜೆ ಇತ್ತು. ಆಯೋಗ ಪೂರ್ವನಿಯೋಜಿತವಾಗಿ ಆಯ್ಕೆ ಪಟ್ಟಿ ಪ್ರಕಟಿಸಿತು’ ಎಂದರು.