<p><strong>ಬೆಂಗಳೂರು:</strong> ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮುಖ್ಯ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಅನಿಲ್ಕುಮಾರ್ (27) ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.</p>.<p>‘ಕೋಲಾರ ಜಿಲ್ಲೆಯ ಅನಿಲ್ಕುಮಾರ್, ಡಿಪ್ಲೊಮಾ ಮುಗಿಸಿ ಕೆಲದಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆ ಕೆಲಸ ಬಿಟ್ಟಿದ್ದ ಆತ, ವಂಚನೆಯಿಂದಲೇ ಹಣ ಸಂಪಾದಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಇತ್ತೀಚೆಗೆ ದೂರುದಾರ ಗಿರೀಶ್ ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ, ತಾನು ಕೆಪಿಎಸ್ಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಯಾರಾದರೂ ಅಭ್ಯರ್ಥಿಗಳಿದ್ದರೆ ಕೆಪಿಎಸ್ಸಿ ಕಚೇರಿಯಲ್ಲಿ ಬೆರಳಚ್ಚುಗಾರ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ಮೊದಲಿಗೆ ₹18 ಸಾವಿರ ಕೊಡಬೇಕು. ₹ 8 ಸಾವಿರ ಖರ್ಚಾಗುತ್ತದೆ. ಉಳಿದ ₹ 10 ಸಾವಿರ ವಾಪಸು ಖಾತೆಗೆ ಜಮೆ ಆಗುತ್ತದೆಂದು ಹೇಳಿದ್ದ.’</p>.<p>‘ಆರೋಪಿ ಮಾತು ನಂಬಿದ್ದ ಗಿರೀಶ್, ಆತನ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ₹8 ಸಾವಿರ ವರ್ಗಾವಣೆ ಮಾಡಿದ್ದರು. ಎಂ.ಎಸ್. ಬಿಲ್ಡಿಂಗ್ ಬಳಿ ಖುದ್ದು ಭೇಟಿಯಾಗಿ ₹ 10 ಸಾವಿರ ನಗದು ನೀಡಿದ್ದರು. ಅದಾಗಿ ಹಲವು ದಿನವಾದರೂ ಆರೋಪಿ ಕೆಲಸ ಕೊಡಿಸಿರಲಿಲ್ಲ. ವಂಚನೆಗೀಡಾಗಿದ್ದು ತಿಳಿಯುತ್ತಿದ್ದಂತೆ ಗಿರೀಶ್ ದೂರು ನೀಡಿದ್ದರು’ ಎಂದು ಪೊಲೀಸರು ವಿವರಿಸಿದರು.</p>.<p class="Subhead">ಹಲವರಿಗೆ ವಂಚನೆ: ‘ಬಂಧಿತ ಆರೋಪಿಯಿಂದ ₹ 25 ಸಾವಿರ ನಗದು ಜಪ್ತಿ ಮಾಡಲಾಗಿದೆ. ಇದುವರೆಗೂ ಈತ ನಾಲ್ವರು ಅಭ್ಯರ್ಥಿಗಳಿಗೆ ವಂಚನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಬೆರಳಚ್ಚುಗಾರ, ಕ್ಲರ್ಕ್, ಕಚೇರಿ ಸಹಾಯಕ, ಹೀಗೆ ನಾನಾ ಹುದ್ದೆಗಳ ಹೆಸರಿನಲ್ಲಿ ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದೆ. ಕೆಲವರಷ್ಟೇ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಆರೋಪಿಯಿಂದ ಯಾರಿಗಾದರೂ ವಂಚನೆಯಾಗಿದ್ದರೆ ವಿಧಾನಸೌಧ ಠಾಣೆಗೆ (080–22942590, 22942086) ಮಾಹಿತಿ ನೀಡಬಹುದು’ ಎಂದು ತಿಳಿಸಿದರು.</p>.<p><strong>ಕೆಪಿಎಸ್ಸಿ ಹೆಸರಿನಲ್ಲಿ ಬ್ಯಾಡ್ಜ್</strong></p>.<p>‘ಅಭ್ಯರ್ಥಿಗಳು ನೋಡಿದ ಕೂಡಲೇ ತಾನೊಬ್ಬ ಕೆಪಿಎಸ್ಸಿ ನೌಕರ ಎಂಬುದು ಗೊತ್ತಾಗಬೇಕೆಂದು ಆರೋಪಿ ಬ್ಯಾಡ್ಜ್ ಮಾಡಿಸಿದ್ದ. ‘ಅನಿಲ್ಕುಮಾರ್, ಕೆಪಿಎಸ್ಸಿ’ ಎಂದು ಬ್ಯಾಡ್ಜ್ನಲ್ಲಿ ಬರೆಸಿದ್ದ. ಅಭ್ಯರ್ಥಿಗಳನ್ನು ಭೇಟಿಯಾಗಲು ಹೋದಾಗ, ಅಂಗಿಯ ಕಿಸೆಗೆ ಬ್ಯಾಡ್ಜ್ ಹಾಕಿಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮುಖ್ಯ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಅನಿಲ್ಕುಮಾರ್ (27) ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.</p>.<p>‘ಕೋಲಾರ ಜಿಲ್ಲೆಯ ಅನಿಲ್ಕುಮಾರ್, ಡಿಪ್ಲೊಮಾ ಮುಗಿಸಿ ಕೆಲದಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆ ಕೆಲಸ ಬಿಟ್ಟಿದ್ದ ಆತ, ವಂಚನೆಯಿಂದಲೇ ಹಣ ಸಂಪಾದಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಇತ್ತೀಚೆಗೆ ದೂರುದಾರ ಗಿರೀಶ್ ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ, ತಾನು ಕೆಪಿಎಸ್ಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಯಾರಾದರೂ ಅಭ್ಯರ್ಥಿಗಳಿದ್ದರೆ ಕೆಪಿಎಸ್ಸಿ ಕಚೇರಿಯಲ್ಲಿ ಬೆರಳಚ್ಚುಗಾರ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ಮೊದಲಿಗೆ ₹18 ಸಾವಿರ ಕೊಡಬೇಕು. ₹ 8 ಸಾವಿರ ಖರ್ಚಾಗುತ್ತದೆ. ಉಳಿದ ₹ 10 ಸಾವಿರ ವಾಪಸು ಖಾತೆಗೆ ಜಮೆ ಆಗುತ್ತದೆಂದು ಹೇಳಿದ್ದ.’</p>.<p>‘ಆರೋಪಿ ಮಾತು ನಂಬಿದ್ದ ಗಿರೀಶ್, ಆತನ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ₹8 ಸಾವಿರ ವರ್ಗಾವಣೆ ಮಾಡಿದ್ದರು. ಎಂ.ಎಸ್. ಬಿಲ್ಡಿಂಗ್ ಬಳಿ ಖುದ್ದು ಭೇಟಿಯಾಗಿ ₹ 10 ಸಾವಿರ ನಗದು ನೀಡಿದ್ದರು. ಅದಾಗಿ ಹಲವು ದಿನವಾದರೂ ಆರೋಪಿ ಕೆಲಸ ಕೊಡಿಸಿರಲಿಲ್ಲ. ವಂಚನೆಗೀಡಾಗಿದ್ದು ತಿಳಿಯುತ್ತಿದ್ದಂತೆ ಗಿರೀಶ್ ದೂರು ನೀಡಿದ್ದರು’ ಎಂದು ಪೊಲೀಸರು ವಿವರಿಸಿದರು.</p>.<p class="Subhead">ಹಲವರಿಗೆ ವಂಚನೆ: ‘ಬಂಧಿತ ಆರೋಪಿಯಿಂದ ₹ 25 ಸಾವಿರ ನಗದು ಜಪ್ತಿ ಮಾಡಲಾಗಿದೆ. ಇದುವರೆಗೂ ಈತ ನಾಲ್ವರು ಅಭ್ಯರ್ಥಿಗಳಿಗೆ ವಂಚನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಬೆರಳಚ್ಚುಗಾರ, ಕ್ಲರ್ಕ್, ಕಚೇರಿ ಸಹಾಯಕ, ಹೀಗೆ ನಾನಾ ಹುದ್ದೆಗಳ ಹೆಸರಿನಲ್ಲಿ ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದೆ. ಕೆಲವರಷ್ಟೇ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಆರೋಪಿಯಿಂದ ಯಾರಿಗಾದರೂ ವಂಚನೆಯಾಗಿದ್ದರೆ ವಿಧಾನಸೌಧ ಠಾಣೆಗೆ (080–22942590, 22942086) ಮಾಹಿತಿ ನೀಡಬಹುದು’ ಎಂದು ತಿಳಿಸಿದರು.</p>.<p><strong>ಕೆಪಿಎಸ್ಸಿ ಹೆಸರಿನಲ್ಲಿ ಬ್ಯಾಡ್ಜ್</strong></p>.<p>‘ಅಭ್ಯರ್ಥಿಗಳು ನೋಡಿದ ಕೂಡಲೇ ತಾನೊಬ್ಬ ಕೆಪಿಎಸ್ಸಿ ನೌಕರ ಎಂಬುದು ಗೊತ್ತಾಗಬೇಕೆಂದು ಆರೋಪಿ ಬ್ಯಾಡ್ಜ್ ಮಾಡಿಸಿದ್ದ. ‘ಅನಿಲ್ಕುಮಾರ್, ಕೆಪಿಎಸ್ಸಿ’ ಎಂದು ಬ್ಯಾಡ್ಜ್ನಲ್ಲಿ ಬರೆಸಿದ್ದ. ಅಭ್ಯರ್ಥಿಗಳನ್ನು ಭೇಟಿಯಾಗಲು ಹೋದಾಗ, ಅಂಗಿಯ ಕಿಸೆಗೆ ಬ್ಯಾಡ್ಜ್ ಹಾಕಿಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>