<p>ಬೆಂಗಳೂರು: ಹೈಟೆನ್ಷನ್ ವೈರ್ಗಳ ಕೆಳಗೆ ಮತ್ತು ಪಕ್ಕದಲ್ಲೇ ಮನೆ ನಿರ್ಮಿಸಿದ 7,722 ಮಂದಿಗೆ ಕೆಪಿಟಿಸಿಎಲ್ ನೋಟಿಸ್ ನೀಡಿದೆ.</p>.<p>ಚಾಮುಂಡಿ ನಗರದ ಫ್ಯಾಕ್ಟರಿ ಬಳಿ ಗಾಳಿಪಟ ಹಾರಿಸಲು ತೆರಳಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಜ.18ರಂದು ಮೃತಪಟ್ಟಿದ್ದ. ಇದಕ್ಕೂ ಮುನ್ನ ಡಿ.1ರಂದು ಮಹಾಲಕ್ಷ್ಮಿ ಲೇಔಟ್ನಲ್ಲಿ ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಿದ್ಯುತ್ ವೈರ್ ತಗುಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಈ ಘಟನೆಗಳ ಬಳಿಕ ಕೆಪಿಟಿಸಿಎಲ್ ಅನಧಿಕೃತ ಕಟ್ಟಡಗಳ ಬಗ್ಗೆ ಜನವರಿ ತಿಂಗಳಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡಿತ್ತು.</p>.<p>ಹೈಟೆನ್ಷನ್ ವೈರ್ (ಇಎಚ್ವಿ) ಹಾದು ಹೋಗಿರುವ ಕೆಳಗೆ ಮತ್ತು ಅತಿ ಸಮೀಪದಲ್ಲೇ ಮನೆಗಳನ್ನು ಕಟ್ಟಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ಕೆಪಿಟಿಸಿಎಲ್ ಗುರುತಿಸಿದೆ. ದೇವನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಹೆಬ್ಬಾಳ, ಹೂಡಿ ಸೇರಿದಂತೆ ನಗರದಾದ್ಯಂತ ಕೆಪಿಟಿಸಿಎಲ್ ಸಮೀಕ್ಷೆ ನಡೆಸಿದ್ದು, 7,722 ಅನಧಿಕೃತ ಕಟ್ಟಡಗಳನ್ನು ಗುರುತಿಸಿದೆ.</p>.<p>’ಹೈಟೆನ್ಷನ್ ವೈರ್ ಮಾರ್ಗದ ಕೆಳಗೆ ಮತ್ತು ಪಕ್ಕದಲ್ಲೇ ಇರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ಗಳನ್ನು ನಿರಂತರವಾಗಿ ನೀಡಲಾಗಿದೆ. ಜತೆಗೆ, ಬಿಬಿಎಂಪಿ, ಬೆಸ್ಕಾಂ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹೆಟೆನ್ಷನ್ ವೈರ್ನಿಂದಾಗುವ ಅಪಾಯಗಳು ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಸಹ ಮಾಡಲಾಗಿದೆ’ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಹೈಟೆನ್ಷನ್ ವೈರ್ಗಳ ಕೆಳಗೆ ಮತ್ತು ಪಕ್ಕದಲ್ಲೇ ಮನೆ ನಿರ್ಮಿಸಿದ 7,722 ಮಂದಿಗೆ ಕೆಪಿಟಿಸಿಎಲ್ ನೋಟಿಸ್ ನೀಡಿದೆ.</p>.<p>ಚಾಮುಂಡಿ ನಗರದ ಫ್ಯಾಕ್ಟರಿ ಬಳಿ ಗಾಳಿಪಟ ಹಾರಿಸಲು ತೆರಳಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಜ.18ರಂದು ಮೃತಪಟ್ಟಿದ್ದ. ಇದಕ್ಕೂ ಮುನ್ನ ಡಿ.1ರಂದು ಮಹಾಲಕ್ಷ್ಮಿ ಲೇಔಟ್ನಲ್ಲಿ ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಿದ್ಯುತ್ ವೈರ್ ತಗುಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಈ ಘಟನೆಗಳ ಬಳಿಕ ಕೆಪಿಟಿಸಿಎಲ್ ಅನಧಿಕೃತ ಕಟ್ಟಡಗಳ ಬಗ್ಗೆ ಜನವರಿ ತಿಂಗಳಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡಿತ್ತು.</p>.<p>ಹೈಟೆನ್ಷನ್ ವೈರ್ (ಇಎಚ್ವಿ) ಹಾದು ಹೋಗಿರುವ ಕೆಳಗೆ ಮತ್ತು ಅತಿ ಸಮೀಪದಲ್ಲೇ ಮನೆಗಳನ್ನು ಕಟ್ಟಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ಕೆಪಿಟಿಸಿಎಲ್ ಗುರುತಿಸಿದೆ. ದೇವನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಹೆಬ್ಬಾಳ, ಹೂಡಿ ಸೇರಿದಂತೆ ನಗರದಾದ್ಯಂತ ಕೆಪಿಟಿಸಿಎಲ್ ಸಮೀಕ್ಷೆ ನಡೆಸಿದ್ದು, 7,722 ಅನಧಿಕೃತ ಕಟ್ಟಡಗಳನ್ನು ಗುರುತಿಸಿದೆ.</p>.<p>’ಹೈಟೆನ್ಷನ್ ವೈರ್ ಮಾರ್ಗದ ಕೆಳಗೆ ಮತ್ತು ಪಕ್ಕದಲ್ಲೇ ಇರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ಗಳನ್ನು ನಿರಂತರವಾಗಿ ನೀಡಲಾಗಿದೆ. ಜತೆಗೆ, ಬಿಬಿಎಂಪಿ, ಬೆಸ್ಕಾಂ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹೆಟೆನ್ಷನ್ ವೈರ್ನಿಂದಾಗುವ ಅಪಾಯಗಳು ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಸಹ ಮಾಡಲಾಗಿದೆ’ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>