<p><strong>ಬೆಂಗಳೂರು:</strong> ‘ಕನ್ನಡದ ಲೇಖಕರು ಕೇವಲ ಧಾರವಾಡ, ಮೈಸೂರು ಅಥವಾ ಬೆಂಗಳೂರಿನಲ್ಲಿ ಮಾತ್ರ ಇಲ್ಲ, ನಾಡಿನಾದ್ಯಂತ ಇದ್ದಾರೆ ಎನ್ನುವ ಅಂಶವನ್ನು ಟ್ರಸ್ಟ್ ಇಂದು ತೋರಿಸಿಕೊಟ್ಟದೆ’ ಎಂದು ಕವಿ ಎಚ್. ಎಸ್. ವೆಂಕಟೇಶಮೂರ್ತಿ ಶ್ಲಾಘಿಸಿದರು.</p>.<p>ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕೆ.ಎಸ್.ನ ಪ್ರಶಸ್ತಿ’ ಹಾಗೂ ‘ಕೆ.ಎಸ್.ನ ಕಾವ್ಯಗಾಯನ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಕೆ.ಎಸ್.ನ ಕಾವ್ಯಗಾಯನ ಪ್ರಶಸ್ತಿ’ ಪುರಸ್ಕೃತ, ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಬಗ್ಗೆ ಮಾತನಾಡಿ, ‘ಭಾಷೆ ಬಗ್ಗೆ ಪ್ರೀತಿ ಇದ್ದವರಿಗೆ ಮಾತ್ರ ಕಾವ್ಯ ಇಷ್ಟವಾಗುತ್ತದೆ. ಅಂತೆಯೇ ಸುಬ್ಬಣ್ಣ ಸಹ. ಭಾಷೆಯ ಬಗೆಗೆ ಬಹಳ<br />ಕಾಳಜಿ ಇರುವವರು. ಆದ್ದರಿಂದಲೇ ಅವರ ಹಾಡುಗಾರಿಕೆ ಮನಸ್ಸಿಗೆ ತಟ್ಟುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕೆ.ಎಸ್.ನ ಪ್ರಶಸ್ತಿ’ ಪುರಸ್ಕೃತ, ಲೇಖಕ ವಿಷ್ಣು ನಾಯ್ಕ ಅವರ ಕುರಿತು ಮಾತನಾಡಿ, ‘ವಿಷ್ಣು ಅವರು ಅಕ್ಷರ ಲೋಕದ ಅಕ್ಕರೆಯ ಮನುಷ್ಯ.ಬಡವರ, ದೀನರ ಬಗ್ಗೆ ಅವರಿಗಿರುವ ಕಾಳಜಿ ಅಪಾರ. ಇದೇ ಅವರ ಬರಹಗಳಲ್ಲೂ ಕಾಣಸಿಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕನ್ನಡದ ಲೇಖಕರು ಕೇವಲ ಧಾರವಾಡ, ಮೈಸೂರು ಅಥವಾ ಬೆಂಗಳೂರಿನಲ್ಲಿ ಮಾತ್ರ ಇಲ್ಲ, ನಾಡಿನಾದ್ಯಂತ ಇದ್ದಾರೆ ಎನ್ನುವ ಅಂಶವನ್ನು ಟ್ರಸ್ಟ್ ಇಂದು ತೋರಿಸಿಕೊಟ್ಟದೆ’ ಎಂದು ಕವಿ ಎಚ್. ಎಸ್. ವೆಂಕಟೇಶಮೂರ್ತಿ ಶ್ಲಾಘಿಸಿದರು.</p>.<p>ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕೆ.ಎಸ್.ನ ಪ್ರಶಸ್ತಿ’ ಹಾಗೂ ‘ಕೆ.ಎಸ್.ನ ಕಾವ್ಯಗಾಯನ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಕೆ.ಎಸ್.ನ ಕಾವ್ಯಗಾಯನ ಪ್ರಶಸ್ತಿ’ ಪುರಸ್ಕೃತ, ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಬಗ್ಗೆ ಮಾತನಾಡಿ, ‘ಭಾಷೆ ಬಗ್ಗೆ ಪ್ರೀತಿ ಇದ್ದವರಿಗೆ ಮಾತ್ರ ಕಾವ್ಯ ಇಷ್ಟವಾಗುತ್ತದೆ. ಅಂತೆಯೇ ಸುಬ್ಬಣ್ಣ ಸಹ. ಭಾಷೆಯ ಬಗೆಗೆ ಬಹಳ<br />ಕಾಳಜಿ ಇರುವವರು. ಆದ್ದರಿಂದಲೇ ಅವರ ಹಾಡುಗಾರಿಕೆ ಮನಸ್ಸಿಗೆ ತಟ್ಟುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕೆ.ಎಸ್.ನ ಪ್ರಶಸ್ತಿ’ ಪುರಸ್ಕೃತ, ಲೇಖಕ ವಿಷ್ಣು ನಾಯ್ಕ ಅವರ ಕುರಿತು ಮಾತನಾಡಿ, ‘ವಿಷ್ಣು ಅವರು ಅಕ್ಷರ ಲೋಕದ ಅಕ್ಕರೆಯ ಮನುಷ್ಯ.ಬಡವರ, ದೀನರ ಬಗ್ಗೆ ಅವರಿಗಿರುವ ಕಾಳಜಿ ಅಪಾರ. ಇದೇ ಅವರ ಬರಹಗಳಲ್ಲೂ ಕಾಣಸಿಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>