‘ಈ ಹಿಂದೆಯೇ 2013ರಲ್ಲಿ ಕುಪ್ಪಳ್ಳಿಯ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದವರು ಹೊರತಂದ ಸಮಗ್ರ ಕೃತಿಗಳಿಗೂ ಇದೀಗ ಕನ್ನಡ ವಿಶ್ವವಿದ್ಯಾಲಯದ ಸಮಗ್ರ ಕೃತಿ ಯಾವ ರೀತಿಯಲ್ಲಿ ಭಿನ್ನ. ಸಂಪಾದಕರ ತೆವಲಿಗೆ, ಕನ್ನಡ ವಿಶ್ವವಿದ್ಯಾಲಯದ ಮೂರ್ಖತನಕ್ಕೆ ಸಂಪುಟಗಳನ್ನು ಭಾರೀ ಮೊತ್ತ ತೆತ್ತು ತೆಗೆದಿಟ್ಟುಕೊಳ್ಳಬೇಕೇ. ಏನೋ ಸಂಶೋಧನೆ ಮಾಡಿರಬಹುದು ಎಂಬ ಭ್ರಮೆಗೆ, ಬಿಡಿ ಬಿಡಿ ಪುಸ್ತಕಗಳ ಮಾರಾಟಕ್ಕೆ ಸಿಗದೇ ಇರುವುದರಿಂದ ನಾಡಿನ ಓದುಗರ ಮೇಲೆ, ಗ್ರಂಥಾಲಯಗಳ ಮೇಲೆ ಮಾಡಿದ ಮೋಸ, ವಂಚನೆ, ದೌರ್ಜನ್ಯವಲ್ಲವೇ’ ಎಂದೂ ಅವರು ಕೇಳಿದ್ದಾರೆ.