'ನಮ್ಮ ಆರು ತಿಂಗಳ ಮಗುವಿನ ಕಣ್ಣುಗಳು ಕಾಣುತ್ತಿರಲಿಲ್ಲ. ಅನೇಕ ಆಸ್ಪತ್ರೆಗಳನ್ನು ಸುತ್ತಿದ್ದೆವಾದರೂ ವೈದ್ಯರು ಚಿಕಿತ್ಸೆ ಮಾಡಲು ಹಿಂಜರಿದಿದ್ದರು. ಆಗ ಮೋದಿ ಕಣ್ಣಿನ ಆಸ್ಪತ್ರೆ ವೈದ್ಯರು ಮಂಜುನಾಥ ನೇತ್ರಾಲಯಕ್ಕೆ ಹೋಗುವಂತೆ ಸೂಚಿಸಿದರು.ಡಾ. ಮಂಜುನಾಥ್ ಅವರನ್ನು ಭೇಟಿ ಮಾಡಿದವು. ಅವರು ಮಗುವಿನ ಲೆನ್ಸ್ ಸೆಕ್ಟೊಮಿ ಶಸ್ತ್ರಚಿಕಿತ್ಸೆ ಮಾಡಿ, ಮತ್ತೆ ಕಣ್ಣು ಕಾಣುವ ಹಾಗೆ ಮಾಡಿದ್ದಾರೆ' ಎಂದು ಮಗುವಿನ ತಾಯಿ ಹೇಮಾವತಿ ಸಂತೋಷ ವ್ಯಕ್ತಪಡಿಸಿದರು.