ಮಳೆ ಕೊರತೆ, ಮಾಕೇನಹಳ್ಳಿ ಗೋಮಾಳದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅರಣ್ಯ ಪ್ರದೇಶ ಕಡಿಮೆಯಾಗಿ ಆಹಾರ ಸಿಗದೇ ಊರುಗಳತ್ತ ಚಿರತೆಗಳು ವಲಸೆ ಬರುತ್ತಿರುವೆ. ಕುರಿ, ಮೇಕೆ, ನಾಯಿ ಹೊತ್ತೊಯ್ಯುತ್ತಿವೆ. ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಈಗ ಹಗಲಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ ಎಂದು ರೈತ ವೀರಚಿಕ್ಕಯ್ಯ ಆತಂಕ ವ್ಯಕ್ತಪಡಿಸಿದರು.