ಬಂಜಗೆರೆ ಜಯಪ್ರಕಾಶ್, ‘ಅಂಬೇಡ್ಕರ್ ಅವರು ಸ್ವತಃ ವಾರ್ಕರಿ ಚಳವಳಿಯ ಸಂತರನ್ನು ಜಾತಿವಿರೋಧಿ ಸಂತರೆಂದು ನೋಡಲು ಸಾಧ್ಯವಾಗಿರಲಿಲ್ಲ. ಅದೇ ರೀತಿ ಕಬೀರರನ್ನೂ ಕೂಡ. ಆದರೆ ರವಿದಾಸರನ್ನು ಮಾತ್ರ ಜಾತಿವಿರೋಧಿ ಪ್ರವರ್ತಕರಾಗಿ ಒಪ್ಪಿದ್ದರು. ಕಾರಣ ಆ ಕಾಲಕ್ಕೆ ಅಂಬೇಡ್ಕರ್ ಅವರಿಗೆ ತಿಳಿದಿದ್ದಂತೆ ವಾರ್ಕರಿ ಚಳವಳಿ ಬ್ರಾಹ್ಮಣೀಕರಿಸಲ್ಪಟ್ಟಿತ್ತು. ಭಾರತದ ಬಹುತೇಕ ಸಂತರು ಭಾರತದ ಇತಿಹಾಸವನ್ನು ಪ್ರವೇಶ ಮಾಡಿರಲಿಲ್ಲ. ಆದರೆ ಜ್ಯೋತಿ ಬಾ ಫುಲೆ ಅವರನ್ನು ಒಳಗೊಂಡಂತೆ ನಂತರ ಬಂದವರು ಭಾರತದ ಚರಿತ್ರೆಯನ್ನು ವಿಶಿಷ್ಟವಾಗಿ ಗ್ರಹಿಸಲೆತ್ನಿಸಿದರು. ಹೀಗಾಗಿ 14ನೇ ಶತಮಾನದಿಂದ ಹಿಡಿದು ಅಂಬೇಡ್ಕರ್ ವರೆಗಿನ ಪ್ರತಿಯೊಬ್ಬ ಸುಧಾರಕರ ಕನಸುಗಳನ್ನು ಗೇಲ್ ಓಮ್ವೆಡ್ತ್ ಅವರು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ’ ಎಂದರು.