ಕಲ್ಲಿಕೋಟೆಯ 58 ವರ್ಷದ ವ್ಯಾಪಾರಿ ಪ್ರದೀಪ್ ಅವರು ಜೂ.25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಯಕೃತ್ತಿನಲ್ಲಿ ಗಡ್ಡೆ ಬೆಳೆದಿತ್ತು. ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿತ್ತು. ಹೀಗಾಗಿ ಅಲ್ಲಿನ ವೈದ್ಯರು ಕಸಿ ಮಾಡಲು ನಿರ್ಧರಿಸಿದರು. ವ್ಯಕ್ತಿಯ ಪತ್ನಿ ಯಕೃತ್ತು ದಾನ ಮಾಡಲು ಮುಂದೆ ಬಂದರು. ಆದರೆ, ಅವರ ಯಕೃತ್ತು ಪತಿಗೆ ಹೊಂದಿಕೆಯಾಗಲಿಲ್ಲ.