ಪ್ರಕರಣದ ಮೂರನೇ ಆರೋಪಿಯಾಗಿರುವ ಸತೀಶ್ ತನ್ನನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ಮತ್ತು ಹೆಡ್ ಕಾನ್ಸ್ಟೆಬಲ್ ಬಳಿ ಮನವಿ ಮಾಡಿದ್ದರು. ಠಾಣಾ ಜಾಮೀನು ಮಂಜೂರು ಮಾಡಲು ಪಿಎಸ್ಐಗೆ ₹ 50,000 ಮತ್ತು ಹೆಡ್ ಕಾನ್ಸ್ಟೆಬಲ್ಗೆ ₹ 5,000 ಲಂಚ ಕೊಡುವಂತೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸತೀಶ್, ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕ–2ಕ್ಕೆ ದೂರು ಸಲ್ಲಿಸಿದ್ದರು.