ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ್ ಮಾತನಾಡಿ, ‘ಎಂಎಸ್ಎಂಇ ಚಟುವಟಿಕೆಗಳಉತ್ತೇಜನಕ್ಕೆ ಕರ್ನಾಟಕ ಹೊಸ ಆವಿಷ್ಕಾರ ಪ್ರಾಧಿಕಾರವನ್ನು ಸರ್ಕಾರ ಸ್ಥಾಪಿಸಲಿದೆ. ಅದರಲ್ಲಿ ವಿವಿಧ ಕ್ಷೇತ್ರದ ಪರಿಣತರು ಇರಲಿದ್ದಾರೆ. ಸಣ್ಣ ಉದ್ದಿಮೆಗಳಿಗೆ ರಾಜ್ಯ ಹಣಕಾಸು ನಿಗಮದ ಮೂಲಕ ಸಾಲ ಪಡೆಯುವವರಿಗೆ ಶೇ 10ರಷ್ಟು ಬಡ್ಡಿ ವಿನಾಯಿತಿಯನ್ನೂ ನೀಡಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆ ಅಡಿ ಕರ್ನಾಟಕ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಸೇರಿದಂತೆ ಈ ಕ್ಷೇತ್ರಕ್ಕೆ ಇಲಾಖೆಯು ಒಟ್ಟು 16 ಯೋಜನೆಗಳನ್ನು ತಂದಿದೆ’ ಎಂದರು.