ಬೆಂಗಳೂರು: ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತಗಳ ಪರಿಷ್ಕೃತ ಪಠ್ಯಗಳಲ್ಲಿ ಅಕ್ಕಮಹಾದೇವಿ, ಕನಕದಾಸರು, ಪುರಂದರದಾಸರು ಮತ್ತು ಸಂತ ಶಿಶುನಾಳ ಶರೀಫರ ವಿವರಗಳನ್ನು ತೆಗೆದುಹಾಕಿರುವುದು ನಾಡು–ನುಡಿ, ಸಂಸ್ಕೃತಿಗೆ ಮಾಡಿದ ಘೋರ ಅವಮಾನ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಟೀಕಿಸಿದ್ದಾರೆ.