‘ದಲಿತರ ಮತ್ತು ಮಹಿಳೆಯರ ಸವಾಲುಗಳಿಗೆ ಪರಿಹಾರ ಸಿಗದ ಹೊರತು, ಮತಾಂಧತೆ ಮತ್ತು ಅದರ ಕ್ರೌರ್ಯದ ನೂರು ರೂಪಗಳು ನಿಲ್ಲದ ಹೊರತು ಈ ಜಗತ್ತಿನಲ್ಲಿ ಶಾಂತಿ ಸಮಾಧಾನ ನೆಲೆಸಲಾರವು. ಶರಣರ ಪರಂಪರೆಯವರು ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳುವ ನಾವು ಮಾತಿನಿಂದ ಕೃತಿಗೆ ಇಳಿಯಬೇಕಾದ ತುರ್ತಿದೆ. ಎದೆಯ ದನಿಯ ಶರಣ ಧರ್ಮವನ್ನು ಜನರ ಧರ್ಮವಾಗಿಸುವ ಜರೂರಿದೆ. ಪ್ರೀತಿ ಮತ್ತು ಸಹಿಷ್ಣುತೆಯ ಮದ್ದನ್ನು ಮೊದಲು ನಾವು ಕುಡಿದು, ಬಳಿಕ ಬೇರೆಯವರಿಗೆ ಕುಡಿಸಬೇಕಾಗಿದೆ’ ಎಂದು ಅವರು ಹೇಳಿದರು.