ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಅವರು ಜನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, 'ಗ್ರಾಮೀಣ ಸೊಗಡನ್ನು ಪಟ್ಟಣದ ನಾಗರಿಕರಿಗೆ ಪರಿಚಯಸುತ್ತಿರುವ ಕೆಲಸ ಶ್ಲಾಘನೀಯ‘ ಎಂದರು. ’ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ಇಂದಿಗೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇನೆ. ಅನ್ನದಾತನೇ ದೇಶದ ಶಕ್ತಿ’ ಎಂದರು.
ಕೆಪಿಸಿಸಿ ಸದಸ್ಯ ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಜಿ.ಮೋಹನ್ ಕುಮಾರ್, ಮುಖಂಡರಾದ ಕೃಷ್ಣಮೂರ್ತಿ, ಕೊಡ್ಲಿ ಮಂಜುನಾಥ್, ರಾಂಪುರ ನಾಗೇಶ್, ಅಮರನಾಥ್, ಲಗ್ಗೆರೆ ರಮೇಶ್ ಗೌಡ, ಜೆ.ದಿನೇಶ್ ಇದ್ದರು.