ಪಠ್ಯಪುಸ್ತಕದಲ್ಲಿ ತಮ್ಮ ಚಿತ್ರ ಇರುವುದನ್ನು ಟ್ಯಾಗ್ ಮಾಡಿ ಬಾಬನ್ ಮಾಡಿರುವ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿರುವ ಸುರೇಶ್, ‘ಪಠ್ಯಪುಸ್ತಕ ಸಂಘವುಯಾವುದೇ ಪರಿಶೀಲನೆ ನಡೆಸದೇ ಅಂತರ್ಜಾಲದಿಂದ ಚಿತ್ರ ಗಳನ್ನು ತೆಗೆದು ಪ್ರಕಟಿಸುತ್ತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿಬೇಕೇ’ಎಂದು ಪ್ರಶ್ನಿಸಿದ್ದಾರೆ.