‘ಅಶೋಕ್ ಅವರು ಐದು ತಿಂಗಳ ಹಿಂದೆ ನರ್ಸಿಂಗ್ ಕೋರ್ಸ್ ಮುಗಿಸಿದ್ದರು. ಅದಾದ ಮೇಲೆ ಎರಡು ತಿಂಗಳಿಂದ ಊರಿನಲ್ಲೇ ಇದ್ದರು. ನರ್ಸಿಂಗ್ ಕೆಲಸ ಸಿಕ್ಕಿದ ಮೇಲೆ 15 ದಿನಗಳ ಹಿಂದಷ್ಟೇ ನಗರಕ್ಕೆ ಬಂದು, ಮಾಗಡಿ ರಸ್ತೆಯಲ್ಲಿರುವ ಚೋಳರಪಾಳ್ಯದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ನಿತ್ಯವು ದೀಪಾಂಜಲಿನಗರದ ಮೆಟ್ರೊ ನಿಲ್ದಾಣಕ್ಕೆ ಬಂದು ಮೆಟ್ರೊ ಮೂಲಕ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದರು’ ಎಂದು ರೈಲ್ವೆ ಪೊಲೀಸರು ತಿಳಿಸಿದರು.