ಚಾಕುವಿನಿಂದ ಇರಿದು ಪರಾರಿ: ‘ತೇಜಸ್ ಜೊತೆ ಗುರುವಾರ ರಾತ್ರಿ ಮಾತುಕತೆ ನಡೆಸಿದ್ದ ತಂದೆ–ತಾಯಿ, ಪುನರ್ವಸತಿ ಕೇಂದ್ರಕ್ಕೆ ಸೇರಿಸುವುದಾಗಿ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ತೇಜಸ್, ಜಗಳ ತೆಗೆದು ರಂಪಾಟ ಮಾಡಿದ್ದ. ಚಾಕುವಿನಿಂದ ತಂದೆ–ತಾಯಿಗೆ ಇರಿದಿದ್ದ. ನಂತರ, ಸೋದರ ಮಾವನಿಗೆ ಚಾಕುವಿನಿಂದ ಚುಚ್ಚಿ ಮನೆಯಿಂದ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.