ಮಂಗಳವಾರ, 10 ಮಾರ್ಚ್ 2026
×
ADVERTISEMENT

ಚಿಕ್ಕಪೇಟೆ-ಕುಂಬಾರ ಪೇಟೆ|ಭಾರಿ ಅಗ್ನಿ ಅವಘಡ: ಹೊತ್ತಿ ಉರಿದ ಪ್ಲಾಸ್ಟಿಕ್ ವಸ್ತುಗಳು

Published : 25 ಫೆಬ್ರುವರಿ 2026, 10:45 IST
Last Updated : 25 ಫೆಬ್ರುವರಿ 2026, 10:45 IST
ADVERTISEMENT
ಫಾಲೋ ಮಾಡಿ
Comments
ಆತಂಕದ ವಾತಾವರಣ:
ಹೊಗೆ ಹಾಗೂ ಬೆಂಕಿಯ ಜ್ವಾಲೆಯಿಂದ ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ಹಾಗೂ ಕಟ್ಟಡದ ಅಕ್ಕಪಕ್ಕದ ಮಳಿಗೆದಾರರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ತಡೆಯಲು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಯಶಸ್ವಿಯಾದರು. ಆದರೂ, ಲಕ್ಷ್ಮಿ ಕಮರ್ಷಿಯಲ್ ಕಟ್ಟಡದಲ್ಲಿರುವ ಕೆಲವು ಮಳಿಗೆಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ.
ಕಳೆದ ವರ್ಷವೂ ಅನಾಹುತ
‘2025ರ ಆಗಸ್ಟ್‌ 16ರಂದು ನಗರ್ತಪೇಟೆಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನವಾಗಿದ್ದರು. ಕಿರಿದಾದ ಪ್ರದೇಶದಲ್ಲಿ ಇರುವ ಕಟ್ಟಡಗಳ ಮಾಲೀಕರು ಎಚ್ಚರಿಕೆ ವಹಿಸಬೇಕು. ಅಗ್ನಿ ನಂದಕ ಉಪಕರಣಗಳನ್ನು ಅಳವಡಿಸಿರಬೇಕೆಂದು ಅಗ್ನಿಶಾಮಕ ಇಲಾಖೆ ಸೂಚನೆ ನೀಡಿತ್ತು. ಆದರೂ, ಪಾಲನೆ ಆಗುತ್ತಿಲ್ಲ’ ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT