ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಲಕ್ಷ ಮೌಲ್ಯದ ತಾಮ್ರ ಕದ್ದಿದ್ದವ ಬಂಧನ

Last Updated 5 ಜೂನ್ 2021, 0:09 IST
ಅಕ್ಷರ ಗಾತ್ರ

ಬೆಂಗಳೂರು: ಸುಲ್ತಾನ್‌ಪೇಟೆ ಮುಖ್ಯರಸ್ತೆಯಲ್ಲಿರುವ ‘ಪೂರ್ವಾಲ್ ಮಾರ್ಟ್’ ಮಳಿಗೆಯಲ್ಲಿ ತಾಮ್ರದ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪದಡಿ ಆರ್‌. ರವಿ (26) ಎಂಬಾತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಪಂತರಪಾಳ್ಯ ನಿವಾಸಿಯಾದ ರವಿ, ಮೇ 19ರಂದು ರಾತ್ರಿ ಕೃತ್ಯ ಎಸಗಿದ್ದ. ಆತನಿಂದ ₹ 3 ಲಕ್ಷ ಮೌಲ್ಯದ ಲೋಹದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಳಿಗೆ ಮಾಲೀಕ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮಳಿಗೆ ಚಾವಣಿಗೆ ಹಾಕಲಾಗಿರುವ ಸಿಮೆಂಟ್ ಶೀಟ್‌ ಒಡೆದು ರಾತ್ರಿ ಒಳ ನುಗ್ಗಿದ್ದ ಆರೋಪಿ, ತಾಮ್ರದ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ. ಮೇ 20ರಂದು ಬೆಳಿಗ್ಗೆ ಮಾಲೀಕ ಮಳಿಗೆಗೆ ಬಂದು ನೋಡಿದಾಗ ಕೃತ್ಯ ಗೊತ್ತಾಗಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT