‘ಶ್ಯಾಮಣ್ಣ ಗಾರ್ಡನ್ನ ಶ್ರೀರಾಮ್, ಹಲವು ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಕಂಪನಿಯೊಂದರ ಉದ್ಯೋಗಿ ಆಗಿರುವ ಮಗ ಕಲ್ಯಾಣ್ಕುಮಾರ್ ಸಹ ವ್ಯವಹಾರಕ್ಕೆ ಸಹಕರಿಸುತ್ತಿದ್ದ. ಜನರಿಗೆ ಸಾಲ ಕೊಡುತ್ತಿದ್ದ ಇವರಿಬ್ಬರು, ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಕೆಲವರು, ಸಹಕಾರ ಇಲಾಖೆಗೆ ದೂರು ನೀಡಿದ್ದರು’ ಎಂದು ಹೇಳಿದರು.