<p><strong>ಬೆಂಗಳೂರು: </strong>ಸ್ಮಾರ್ಟ್ ಮೊಬಿಲಿಟಿ ಕಾರ್ಡ್ ಬಳಕೆ ಮಾಡುವ ಮೆಟ್ರೊ ರೈಲು ಪ್ರಯಾಣಿಕರಿಗೆ ನೀಡುತ್ತಿದ್ದ ಶೇ 15ರಷ್ಟು ರಿಯಾಯಿತಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಶೇ 10ರಷ್ಟು ಕಡಿತಗೊಳಿಸಿದೆ.</p>.<p>ಒಂದು ನಿಲ್ದಾಣದಿಂದ ನಿರ್ದಿಷ್ಟ ನಿಲ್ದಾಣಕ್ಕೆ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಅಂದಾಜು ₹10 ಇದ್ದರೆ, ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ₹7 ಇತ್ತು. ಈಗ ಶೇ 5ರಷ್ಟು ಮಾತ್ರ ರಿಯಾಯಿತಿ ದೊರೆಯಲಿದ್ದು, 50 ಪೈಸೆ ಮಾತ್ರ ರಿಯಾಯಿತಿ ದೊರೆಯಲಿದೆ. ಪರಿಷ್ಕೃತ ದರವು ಜ.20ರಿಂದ ಅನ್ವಯವಾಗಲಿದೆ ಎಂದು ನಿಗಮ ತಿಳಿಸಿದೆ.</p>.<p>‘ಎಲ್ಲಾ ಮೆಟ್ರೊ ರೈಲುಗಳನ್ನು 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಇದರ ಜತೆಗೆ ಸಾಮಾನ್ಯ ಸೇವೆಗಳ ವೆಚ್ಚವೂ ಹೆಚ್ಚಳವಾಗಿದೆ. ಆದರೂ 2017ರಿಂದ ಪ್ರಯಾಣದರ ಹೆಚ್ಚಳ ಮಾಡಿಲ್ಲ. ಹೀಗಾಗಿ 2019–2020ನೇ ಆರ್ಥಿಕ ವರ್ಷದಲ್ಲಿ ₹60 ಕೋಟಿ ನಷ್ಟ ಅಂದಾಜಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.</p>.<p>ನಿತ್ಯ ಸುಮಾರು 4.20 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇ 62ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರಿಗೂ ಇದರ ಬಿಸಿ ತಟ್ಟಲಿದೆ.</p>.<p>ರಿಯಾಯಿತಿ ಕಡಿತದಿಂದ ಪ್ರತಿದಿನ ₹7 ಲಕ್ಷದಿಂದ ₹8 ಲಕ್ಷ (ತಿಂಗಳಿಗೆ ₹2 ಕೋಟಿ) ಹೆಚ್ಚುವರಿ ಆದಾಯವನ್ನು ನಿಗಮ ನಿರೀಕ್ಷಿಸಿದೆ. ಸ್ಮಾರ್ಟ್ ಕಾರ್ಡ್ನಲ್ಲಿ ಕನಿಷ್ಠ ₹50 ಠೇವಣಿ ಇರಬೇಕು ಎಂಬುದನ್ನು ಇತ್ತೀಚೆಗೆ ಕಡ್ಡಾಯಗೊಳಿಸಿತ್ತು.</p>.<p><strong>ಪ್ರಯಾಣಿಕರ ಆಕ್ರೋಶ</strong></p>.<p>‘ಪ್ರಯಾಣದರದಿಂದ ತಿಂಗಳಿಗೆ ₹30 ಕೋಟಿಯಿಂದ ₹33 ಕೋಟಿ ವರಮಾನವನ್ನು ಬಿಎಂಆರ್ಸಿಎಲ್ ಸಂಗ್ರಹಿಸುತ್ತಿದೆ. ಇದರಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರ ಪಾಲು ಸರಾಸರಿ ₹19 ಕೋಟಿ ಇದೆ. ಮುಂಗಡವಾಗಿಯೇ ಸ್ಮಾರ್ಟ್ ಕಾರ್ಡ್ಗೆ ಹಣ ಸಂದಾಯ ಮಾಡುವ ಪ್ರಯಾಣಿಕರ ಈ ಮೊತ್ತಕ್ಕೆ ನಿಗಮ ಬಡ್ಡಿ ಪಾವತಿಸುವುದಿಲ್ಲ. ಅದರ ಬದಲಿಗೆ ಈ ಪ್ರಯಾಣಿಕರಿಗೆ ಶೇ 15ರಷ್ಟು ರಿಯಾಯಿತಿ ನೀಡುತ್ತಿತ್ತು. ಅದನ್ನು ಕಡಿತಗೊಳಿಸಿರುವುದು ಸರಿಯಲ್ಲ’ ಎಂದು ’ನಮ್ಮ ಮೆಟ್ರೊ’ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸ್ಮಾರ್ಟ್ ಮೊಬಿಲಿಟಿ ಕಾರ್ಡ್ ಬಳಕೆ ಮಾಡುವ ಮೆಟ್ರೊ ರೈಲು ಪ್ರಯಾಣಿಕರಿಗೆ ನೀಡುತ್ತಿದ್ದ ಶೇ 15ರಷ್ಟು ರಿಯಾಯಿತಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಶೇ 10ರಷ್ಟು ಕಡಿತಗೊಳಿಸಿದೆ.</p>.<p>ಒಂದು ನಿಲ್ದಾಣದಿಂದ ನಿರ್ದಿಷ್ಟ ನಿಲ್ದಾಣಕ್ಕೆ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಅಂದಾಜು ₹10 ಇದ್ದರೆ, ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ₹7 ಇತ್ತು. ಈಗ ಶೇ 5ರಷ್ಟು ಮಾತ್ರ ರಿಯಾಯಿತಿ ದೊರೆಯಲಿದ್ದು, 50 ಪೈಸೆ ಮಾತ್ರ ರಿಯಾಯಿತಿ ದೊರೆಯಲಿದೆ. ಪರಿಷ್ಕೃತ ದರವು ಜ.20ರಿಂದ ಅನ್ವಯವಾಗಲಿದೆ ಎಂದು ನಿಗಮ ತಿಳಿಸಿದೆ.</p>.<p>‘ಎಲ್ಲಾ ಮೆಟ್ರೊ ರೈಲುಗಳನ್ನು 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಇದರ ಜತೆಗೆ ಸಾಮಾನ್ಯ ಸೇವೆಗಳ ವೆಚ್ಚವೂ ಹೆಚ್ಚಳವಾಗಿದೆ. ಆದರೂ 2017ರಿಂದ ಪ್ರಯಾಣದರ ಹೆಚ್ಚಳ ಮಾಡಿಲ್ಲ. ಹೀಗಾಗಿ 2019–2020ನೇ ಆರ್ಥಿಕ ವರ್ಷದಲ್ಲಿ ₹60 ಕೋಟಿ ನಷ್ಟ ಅಂದಾಜಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.</p>.<p>ನಿತ್ಯ ಸುಮಾರು 4.20 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇ 62ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರಿಗೂ ಇದರ ಬಿಸಿ ತಟ್ಟಲಿದೆ.</p>.<p>ರಿಯಾಯಿತಿ ಕಡಿತದಿಂದ ಪ್ರತಿದಿನ ₹7 ಲಕ್ಷದಿಂದ ₹8 ಲಕ್ಷ (ತಿಂಗಳಿಗೆ ₹2 ಕೋಟಿ) ಹೆಚ್ಚುವರಿ ಆದಾಯವನ್ನು ನಿಗಮ ನಿರೀಕ್ಷಿಸಿದೆ. ಸ್ಮಾರ್ಟ್ ಕಾರ್ಡ್ನಲ್ಲಿ ಕನಿಷ್ಠ ₹50 ಠೇವಣಿ ಇರಬೇಕು ಎಂಬುದನ್ನು ಇತ್ತೀಚೆಗೆ ಕಡ್ಡಾಯಗೊಳಿಸಿತ್ತು.</p>.<p><strong>ಪ್ರಯಾಣಿಕರ ಆಕ್ರೋಶ</strong></p>.<p>‘ಪ್ರಯಾಣದರದಿಂದ ತಿಂಗಳಿಗೆ ₹30 ಕೋಟಿಯಿಂದ ₹33 ಕೋಟಿ ವರಮಾನವನ್ನು ಬಿಎಂಆರ್ಸಿಎಲ್ ಸಂಗ್ರಹಿಸುತ್ತಿದೆ. ಇದರಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರ ಪಾಲು ಸರಾಸರಿ ₹19 ಕೋಟಿ ಇದೆ. ಮುಂಗಡವಾಗಿಯೇ ಸ್ಮಾರ್ಟ್ ಕಾರ್ಡ್ಗೆ ಹಣ ಸಂದಾಯ ಮಾಡುವ ಪ್ರಯಾಣಿಕರ ಈ ಮೊತ್ತಕ್ಕೆ ನಿಗಮ ಬಡ್ಡಿ ಪಾವತಿಸುವುದಿಲ್ಲ. ಅದರ ಬದಲಿಗೆ ಈ ಪ್ರಯಾಣಿಕರಿಗೆ ಶೇ 15ರಷ್ಟು ರಿಯಾಯಿತಿ ನೀಡುತ್ತಿತ್ತು. ಅದನ್ನು ಕಡಿತಗೊಳಿಸಿರುವುದು ಸರಿಯಲ್ಲ’ ಎಂದು ’ನಮ್ಮ ಮೆಟ್ರೊ’ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>