‘ನಗರದ ಮೈಲಸಂದ್ರ ನಿವಾಸಿಯಾಗಿರುವ ಅಂಥೋಣಿ, ಕಟ್ಟಡಗಳ ಅವಶೇಷಗಳನ್ನು ಟಿಪ್ಪರ್ ಲಾರಿಗೆ ತುಂಬುವ ಕೆಲಸ ಮಾಡಿಕೊಂಡಿದ್ದರು. ತಮಿಳುನಾಡು ಮೂಲದ ರಾಜು ಕೂಡ ಇದೇ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಬಿಳೇಕಹಳ್ಳಿ ಬಳಿ ಇದ್ದ ಶೆಡ್ವೊಂದರಲ್ಲಿ ಇರುತ್ತಿದ್ದರು. ಇದೇ 9ರಂದು ಕೂಲಿ ವಿಚಾರವಾಗಿ ಅಂಥೋಣಿಯು ಆರೋಪಿ ಜೊತೆ ಜಗಳವಾಡಿದ್ದರು. ಗುರುವಾರ ಸಂಜೆಯೂ ಪರಸ್ಪರರ ನಡುವೆ ಗಲಾಟೆ ನಡೆದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.