ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜಲಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು, ‘ಕೋಲಾರದ ಕೆರೆಗಳಿಗೆ ಬಿಡುತ್ತಿರುವ ನೀರು ಸಂಸ್ಕರಣೆಗೊಳ್ಳುತ್ತಿಲ್ಲ. ಹರಿಯುವ ನೀರು ವಾಸನೆ ಬರುತ್ತದೆ ಎಂದರೆ ಏನರ್ಥ? ಕೋಲಾರದ ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಸುವ ಯೋಜನೆ ಇದಾಗಿದೆ. ಈ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ಹರಿಸಬೇಕಿದೆ. ಆದರೆ, ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.